ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ ಜೀವಿಕ ತರಬೇತಿ ಕೇಂದ್ರದಲ್ಲಿ ಇಂದು ಜೀವಿಕ ಸಂಘಟನೆ ಮತ್ತು ಸುಭಾಷ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರೇರೆಯುವ ಮೂಲಕ ಉದ್ಘಾಟಿಸಿದ ತಹಶಿಲ್ದಾರ ಶ್ರೀನಿವಾಸ ಮಾತಾನಾಡಿ ನಾನು ಅತ್ಯಂತ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಒಂದೂಂದು ತುತ್ತು ಅನ್ನಕ್ಕೂ ಕಷ್ಟಪಟ್ಟು ಬಟ್ಟೆ ಇಲ್ಲದೇ ಪುಸ್ತಕ ಇಲ್ಲದೆ ಓದಿ ಮೇಲೆ ಬಂದಿರುವ ವ್ಯಕ್ತಿ. ಅಷ್ಟೆ ಅಲ್ಲ ನಮ್ಮ ಮನೆಯಲ್ಲಿ ನಾಲ್ಕು ಜನ ಅಣ್ಣತಮ್ಮಂದಿರು ಇದ್ದರೆ ಮೊದಲನೇ ಅಣ್ಣನಿಗೆ ಕೂಡಿಸಿದ ಬ್ಯಾಗು ಎರಡನೇ ಮಗನಿಗೆ, ಎರಡನೇ ಯವನದು ಮೂರನೆ ಯವನಿಗೆ, ಮೂರನೇಯವನ ಬ್ಯಾಗ್ ಅಂತಿಮವಾಗಿ ಕೊನೆಯವನಿಗೆ ಅಂದರೆ ನನಗೆ ಈ ಬ್ಯಾಗನ್ನು ಬಳೋಸಕ್ಕು ಯೋಗ್ಯವಾಗಿರಲಿಲ್ಲ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಓದಿ ಮಿಲಿಟರಿ ಸೇರಿ ದೇಶ ಸೇವೆ ಮಾಡಿ ನಂತರ ಕೆಎಎಸ್ ಮಾಡಿ ತಹಶೀಲ್ದಾರ್ ಆಗಿ ಸೇವೆ ಮಾಡುತ್ತಿದ್ದೆನೆ ಎಂದು ಅವರ ಅನುಭವ ಹಂಚಿಕೊಂಡರು.

ಪ್ರಾಸ್ತಾವಿಕವಾಗಿ ಜೀವಿಕ ರಾಜ್ಯ ಸಂಚಾಲಕ ಉಮೇಶ್. ಬಿ.ನೂರಲಕುಪ್ಪೆ ಮಾತಾನಾಡಿ ಇಂದು ನಾವು ಜೀತಮುಕ್ತ ಮತ್ತು ಪೋಷಕರಿಲ್ಲದ ಅತ್ಯಂತ ಕಡುಬಡತನದ ಮಕ್ಕಳಿಗೆ ಇಂದು ನಾವು ನೈತಿಕವಾಗಿ ನಿಮ್ಮೊಂದಿಗೆ ಇದ್ದೆವೆ ಎಂದು ಬೆಂಬಲ ನೀಡುತ್ತಿದ್ದೆವೆ. ಇದನ್ನು ಬಳಸಿಕೊಂಡು ನೀವು ಶ್ರದ್ಧೆಯಿಂದ ವಿಧ್ಯಾಭ್ಯಾಸ ಮಾಡಬೇಕು ನಿಮಗಾಗಿ ತಮ್ಮ ಜೀವನವನ್ನೆ ಸವೆಸುತ್ತಿರುವ ಅಪ್ಪ ಅಮ್ಮರ ಕಷ್ಟವನ್ನು ನೀವು ನೆನಪಿಸಿಕೊಳ್ಳಬೇಕು ಅವರ ದುಡಿಮೆಯ ಫಲವೇ ನಿಮಗೆ ಆದರ್ಶವಾಗಬೇಕು ಮತ್ತೆ ಓದುವ ವಯಸ್ಸಿನಲ್ಲಿ ಅಡ್ಡದಾರಿ ಹಿಡಿಯಬಾರದು ಹಾಗೆ ಪೋಷಕರು ಕೂಡ ತಮ್ಮ ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಗಮನ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಪ್ರಭ ಮುಖ್ಯ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ಮಾತಾನಾಡಿ ಶಿಕ್ಷಣ ನಮಗೆ ಗೌರವ ಮತ್ತು ಘನತೆಯನ್ನು ತಂದುಕೊಡುತ್ತದೆ. ಅದ್ದರಿಂದ ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ನಮ್ಮ ಬಾಲ್ಯವನ್ನು ನೆನೆಸಿಕೊಂಡರೆ ನಿಜವಾಗಿಯೂ ನಮಗೆ ನೋವಾಗುತ್ತೆ ಕಾರಣ ನಮ್ಮ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುವವರು ಇರಲೇ ಇಲ್ಲ. ಆದರೆ ಇಂದು ನೂರಾರು ಜನ ದಾನಿಗಳು ಮಕ್ಕಳ ವಿದ್ಯೆಗೆ ಸಹಾಯ ಮಾಡುತ್ತಿದ್ದಾರೆ. ಮತ್ತೆ ಇವತ್ತು ಮಕ್ಕಳಿಗೆ ನೀಡಿರುವ ವಸ್ತುಗಳು ಅತ್ಯಂತ ಗುಣಮಟ್ಟದಿಂದ ಕೂಡಿವೆ, ಈ ಅವಕಾಶವನ್ನು ಬಳಸಿಕೊಂಡು ಪ್ರತಿಯೊಂದು ಮಗುವು ಉತ್ಯಮವಾದ ವ್ಯಾಸಂಗ ಮಾಡಿ ಉನ್ನತ ಹುದ್ದೆಯನ್ನು ಪಡೆಯಬೇಕು ಎಂದು ಸಲಹೆ ನೀಡುತ್ತಾ ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ದೊಡ್ಡ ದೊಡ್ಡ ಲೇಖಕರ. ಸಾಹಿತಿಗಳ. ದಾರ್ಶನಿಕರ ಅತ್ಯುತ್ತಮವಾದ ಪುಸ್ತಕಗಳನ್ನು ಓದಿ ಎಂದು ಹೇಳುವ ಮೂಲಕ ತಮ್ಮ ಬಾಲ್ಯಜೀವನದ ಪುಟಗಳನ್ನು ಮಕ್ಕಳ ಮುಂದೆ ಬಿಚ್ಚಿಟ್ಟರು.

ಬಳಿಕ ಮಾತಾನಾಡಿದ ಹಿರಿಯ ಮ್ಯಾನೇಜರ್ ಸೆಂದಿಲ್ ಕುಮಾರ್ ನಾನು ಬಾಲ್ಯದಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ನೆನೆಪಿಸಿಕೊಂಡು ಮುಂದೆ ನಮ್ಮ ಮಕ್ಕಳ ಜೀವನದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಬರಬಾರದು ಎಂದು ಮನಗಂಡು ನಾವು ಈ ಮಕ್ಕಳ ವಿಧ್ಯಾಭ್ಯಾಸಕ್ಕೆ ಕೈಜೋಡಿಸುತ್ತಿದ್ದೆವೆ. ಹಾಗೂ ತಂದೆ ತಾಯಿಗಳು ಸಹ ಧಾರಾವಾಹಿ ಮತ್ತು ಸಿನಿಮಕ್ಕೆ ಅಂಟಿಕೊಳ್ಳದೇ ಮಕ್ಕಳ ಚಲನವಲನದ ಬಗ್ಗೆ ಗಮನ ಹರಿಸಿ ಮತ್ತೆ ಯಾವ ಮಗುವು ಕೂಡ ಬಟ್ಟೆಯಿಲ್ಲ. ಪುಸ್ತಕವಿಲ್ಲ. ನನಗೆ ಬಡತನ ಎಂದು ಕೈಕಟ್ಟಿ ಕುಳಿತುಕೊಳ್ಳ ಬಾರದು ಓದುವ ಪ್ರಯತ್ನ ಬಿಡಬಾರದು ಎಂದರು ತಿಳಿಸಿದರು.
ಇದೆ ಸಮಯದಲ್ಲಿ ಸುಮಾರು ಐವತ್ತಕ್ಕೂ ಹೆಚ್ವು ಮಕ್ಕಳಿಗೆ ಉತ್ತಮ ಗುಣಮಟ್ಟದ ಪಠ್ಯಪರಿಕರಗಳನ್ನ ವಿತರಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೀವಿಕ ಬಸವರಾಜ್. ಪ್ರಗತಿಪರ ಮುಖಂಡ ಅಕ್ಬರ್ ಪಾಷ. ಶಿವಕುಮಾರ್. ಅಧ್ಯಕ್ಷ ಮಹದೇವ. ಮಾಜಿ ಅಧ್ಯಕ್ಷೆ ಮಲ್ಲಿಗಮ್ಮ. ಪೀಪಲ್ ಟ್ರೀ ಜವರೇಗೌಡ. ಇಂಜಿನಿಯರ್ ನಿರಂಜನ್. ಮಹೇಶ್ ಕುಮಾರ್. ಭಾಸ್ಕರ್. ಲಕ್ಷ್ಮಮ್ಮ. ಸಂಚಾಲಕ ಚಂದ್ರಶೇಖರ ಮೂರ್ತಿ. ಶಿವರಾಜ್ ಮಟಕೆರೆ. ವೆಂಕಟೇಶ್. ನಟರಾಜ್. ಶ್ರೀನಿವಾಸ್. ನಾಗಮ್ಮ. ಮಲ್ಲಿಗಮ್ಮ. ಗೋಪಾಲ್ ಮತ್ತು ಮಕ್ಕಳು ಪೋಷಕರು ಹಾಜರಿದ್ದರು.