Monday, June 9, 2025
Google search engine

Homeಅಪರಾಧಹಾಸನ: ಕಾರಿನಿಂದ ₹6.30 ಲಕ್ಷ ಕಳವು; ಕಳ್ಳ ಪರಾರಿ

ಹಾಸನ: ಕಾರಿನಿಂದ ₹6.30 ಲಕ್ಷ ಕಳವು; ಕಳ್ಳ ಪರಾರಿ

ಹಾಸನ: ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಸುಭಾಷ್ ನಗರದಲ್ಲಿ ನಿಲ್ಲಿಸಿದ್ದ ಕಾರಿನಿಂದ ₹6.30 ಲಕ್ಷ ನಗದು ಕಳುವಾದ ಘಟನೆ ನಡೆದಿದೆ. ತಮಿಳುನಾಡಿನ ಸುರೇಶ್ ಎಂಬವರು ಈ ಹಣ ಕಳೆದುಕೊಂಡಿದ್ದು, ಅವರು ಕಳೆದ 9 ವರ್ಷಗಳಿಂದ ಎಪಿಎಂಸಿಯಲ್ಲಿ ಕೊಬ್ಬರಿ ಅಂಗಡಿ ನಡೆಸುತ್ತಿದ್ದಾರೆ. ಅವರು ಫೆಡರಲ್ ಬ್ಯಾಂಕಿನಿಂದ ₹6 ಲಕ್ಷ ಡ್ರಾ ಮಾಡಿಕೊಂಡು, ತಮ್ಮ ಬಳಿ ಇದ್ದ ₹30 ಸಾವಿರ ಸೇರಿಸಿ ₹6.30 ಲಕ್ಷ ಹಣವನ್ನು KA-18-M-8952 ನಂಬರ್‌ನ ಕಾರಿನಲ್ಲಿ ಇಟ್ಟಿದ್ದರು. ಅಂಗಡಿಯ ಮುಂಭಾಗ ಕಾರು ನಿಲ್ಲಿಸಿ, ಲಾಕ್ ಮಾಡದೇ ಒಳಗೆ ಹೋದಾಗ ಈ ಘಟನೆ ಸಂಭವಿಸಿದೆ. ಅವರು ವಾಪಸ್ ಬಂದು ನೋಡಿದಾಗ ಹಣ ಕಳುವಾಗಿದೆ.

ಸಿಸಿಟಿವಿಯಲ್ಲಿ ಕಳವು ದೃಢಪಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES
- Advertisment -
Google search engine

Most Popular