Friday, April 18, 2025
Google search engine

Homeಸ್ಥಳೀಯಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ: ಟಿ ಎಸ್ ಶ್ರೀವತ್ಸ

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ: ಟಿ ಎಸ್ ಶ್ರೀವತ್ಸ

ಮೈಸೂರು: ರಕ್ತದಾನ ಅತ್ಯಂತ ಶ್ರೇಷ್ಠವಾದುದು ಇನ್ನೊಬ್ಬರ ಜೀವ ಉಳಿಸಲು ಸಹಾಯವಾಗುವ ಈ ಕಾರ್ಯದಲ್ಲಿ ಯುವ ಸಮುದಾಯ ಹೆಚ್ಚಿನ ಆಸಕ್ತಿ ವಹಿಸಿ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದು ಶಾಸಕ ಟಿಎಸ್ ಶ್ರೀವತ್ಸ ಹೇಳಿದರು.

ಮಾನಂದವಾಡಿ ರಸ್ತೆ ಎಲ್ಲಿರುವ ಎನ್ಐಇ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮತ್ತು ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಹಾಗೂ ಎನ್ ಐಇ ಕಾಲೇಜು ಸಹಯೋಗದೊಂದಿಗೆ 30ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಜೀವ ರಕ್ಷಕ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.

ಅತಿ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನದ ಶಿಬಿರದ ಆಯೋಜಕರಾದ ಜೆ. ಕೆ ಟೈರ್ ಅಂಡ್  ಇಂಡಸ್ಟ್ರೀಸ್ ಲಿಮಿಟೆಡ್, ಸೀನಿಯರ್ ಜನರಲ್ ಮ್ಯಾನೇಜರ್ ಜಗದೀಶ್ ಆರ್, ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ನಾಗರಾಜ್, ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಸೀನಿಯರ್ ಮ್ಯಾನೇಜರ್ ಲತಾ ಓಂ ಪ್ರಕಾಶ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರು ಆನಂದ್ ಮಂಡೋತ್ ಹಾಗೂ ದೇವೇಂದ್ರ ಪರಿಹಾರೀಯ ಅವರನ್ನು ಅಭಿನಂದಿಸಲಾಯಿತು.

30ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ  ರಕ್ತದಾನಿಗಳಿಗೆ ಜೀವ ರಕ್ಷಕ ಪ್ರಶಸ್ತಿ ಪ್ರಧಾನ ಸ್ವೀಕರಿಸಿದ ಕೇಶವ ಗೌಡ .ಎಂ ಪಿ, ನಂಜುಂಡಸ್ವಾಮಿ, ಕುಮಾರಿ ಮೇಧ, ಅನನ್ಯ ಪ್ರಭು , ಗಿರಿಜಾ ಪಾಟೀಲ್, ಹರೀಶ್ ಪಿ, ಮಸರ ರಾಮ್ ಮಾಲಿ, ಗೋಪಾಲ್, ರಾಮಚಂದ್ರ ಎಸ್, ಶಿವಕುಮಾರ್ ಹಾಂಜಿ, ಸುಹಾಸ್ ರವರಿಗೆ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾತನಾಡಿದ ಶಾಸಕ ಟಿಎಸ್ ಶ್ರೀವತ್ಸ ರವರು ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಆರೋಗ್ಯದ ಕಾಳಜಿಯೂ ಅಷ್ಠೆ ಅವಶ್ಯಕ, ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಸಹ ರಕ್ತಕ್ಕೆ ಪರ್ಯಾಯ ರಕ್ತದಾನವೇ ಹೊರೆತು ಮತ್ತೊಂದಿಲ್ಲ, ಕೋವಿಡ್ ಸಂಧರ್ಭದಲ್ಲಿ ರಕ್ತದಾನಿಗಳ ಸೇವೆ ಮತ್ತು ರಕ್ತನಿಧಿ ಕೇಂದ್ರಗಳ ಜವಬ್ದಾರಿಯುತ ಕೆಲಸಗಳು ಕೈಗೊಂಡಿದ್ದು ಶ್ಲಾಘನೀಯವಾದುದು , ಮುಂದಿನ‌ ದಿನದಲ್ಲಿ ರಾಜ್ಯ ಸರ್ಕಾರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ರಕ್ತದಾನಿಗಳನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಕ್ತದಾನಿಗಳಿಗೆ ಸರ್ಕಾರಿ ಸವಲತ್ತಿಮಲ್ಲಿ ಪ್ರಮುಖ ಆದ್ಯತೆ ಸಬ್ಸಿಡಿ ಯೋಜನೆಗಳನ್ನ ಕಲ್ಪಿಸುವ ಯೋಜನೆ ತರಲು ಮುಂದಾಗಬೇಕು ಎಂದರು.

ನಂತರ ಮಾತನಾಡಿದ ಮಹಾಪೌರರಾದ ಶಿವಕುಮಾರ್ ರಕ್ತ, ನೇತ್ರ,ದೇಹದಾನ ಪವಿತ್ರ ರಕ್ತದಾನವು ಇನ್ನೊಂದು ಜೀವ ಉಳಿಸಬಲ್ಲ ಸಂಜೀವಿನಿಯಾಗಿದ್ದು, ದಾನಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಆಧುನಿಕ ದಿನದಲ್ಲಿ ರಕ್ತದಾನದ ಅವಶ್ಯಕತೆ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ನೀವು ಮಾಡುತ್ತಿರುವುದು ಶ್ರೇಷ್ಠ ಕೆಲಸ, ದಯವಿಟ್ಟು ಇದನ್ನು ಮುಂದುವರಿಸ ಬೇಕು. ಈ ಮೂಲಕ ನೀವು ಅನೇಕ ಜೀವಗಳನ್ನು ಉಳಿಸಬಹುದು ನಿಮ್ಮ ಕಾರ್ಯಕ್ಕೆ ಶ್ಲಾಘನೀಯ ಎಂದು ತಿಳಿಸಿದರು.

ಕೆ ಆರ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್‍,  ರಕ್ತದಾನದ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ DAPACU ಅಧಿಕಾರಿಯದ ಡಾ. ಮಹಮ್ಮದ್ ಸಿರಾಜ್ ಅಹಮದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ, ಎನ್ಐಇ ಕಾಲೇಜ್ ಉಪ ಪ್ರಾಂಶುಪಾಲರಾದ ಡಾಕ್ಟರ್ ಎಂ ಎಸ್ ಗಣೇಶ್ ಪ್ರಸಾದ್, ರಶ್ಮಿ , ಮಮತಾ, ಸುರೇಶ್, ಅಜಯ್ ಶಾಸ್ತ್ರಿ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular