ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು, ಮಳೆ ಆರ್ಭಟಕ್ಕೆ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೇ ಮೊದಲ ಬಾರಿಗೆ ಗೌರಿ ಹೊಳೆಯಲ್ಲಿ ಪ್ರವಾಹ ಬಂದ ಪರಿಣಾಮ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸವಣೂರು ಸಮೀಪದ ಸರ್ವೆ ಎಂಬಲ್ಲಿ ಗೌರಿ ಹೊಳೆ ತುಂಬಿ ಹರಿದಿದ್ದು, ನೀರು ರಸ್ತೆ ಮೇಲೆ ಹರಿದ ಪರಿಣಾಮ ನಿನ್ನೆ ರಾತ್ರಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಪ್ರದೇಶದಲ್ಲಿರುವ ಹತ್ತಕ್ಕೂ ಮಿಕ್ಕಿದ ಮನೆಗಳು ಬಾಗಶ ಮುಳುಗಡೆಯಾಗಿದ್ದು, NDRF ನಿಂದ ಅಪಾಯದಲ್ಲಿದ್ದ ಮನೆ ಮಂದಿಯ ರಕ್ಷಣೆ ಮಾಡಲಾಗಿದೆ.