ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಪ್ರಶಾಂತ್ ಡಿಸೋಜಾ ಎಂಬವರು ದಿನಸಿ ಅಂಗಡಿ ನಡೆಸುತ್ತಿದ್ದು ಮಹಾನಗರ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮಳೆಯ ನೀರು ಚರಂಡಿಯಲ್ಲಿ ತುಂಬಿ ಅಂಗಡಿಯ ಬಾಗಿ ಮತ್ತು ಗೋಡೆ ಹಾನಿಗೊಳಗಾಗಿದೆ.
ಕಾಮಗಾರಿಯ ವೇಳೆ ಮುಂಜಾಗ್ರತಾ ಕ್ರಮವನ್ನು ವಹಿಸದೇ ಚರಂಡಿ ಕಾಮಗಾರಿ ನಡೆಸಿದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈ ಘಟನೆ ನಡೆದು ನಷ್ಟ ಸಂಭವಿಸಿದೆ. ಅಂಗಡಿಯಲ್ಲಿದ್ದ ಪ್ರಿಡ್ಜ್ ಮತ್ತು ಧವಸ ಧಾನ್ಯಗಳು ಐಸ್ ಕ್ರೀಂ ಇನ್ನಿತರ ವಸ್ತುಗಳು ಹಾಳಾಗಿದ್ದು, ಸುಮಾರು ಮೂರು ಲಕ್ಷದಷ್ಟು ಸಷ್ಟವಾಗಿದ್ದು ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.