Friday, April 11, 2025
Google search engine

Homeರಾಜ್ಯಮಕ್ಕಳು ಸಂಯಮ, ಸಹನೆ, ಶ್ರಮದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಬದುಕು ಅಭಿವೃದ್ಧಿ: ಬಿ ವಿ ಮಂಜುನಾಥ್

ಮಕ್ಕಳು ಸಂಯಮ, ಸಹನೆ, ಶ್ರಮದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಬದುಕು ಅಭಿವೃದ್ಧಿ: ಬಿ ವಿ ಮಂಜುನಾಥ್

ವರದಿ: ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ: ಮಕ್ಕಳು ಸಂಯಮ ಸಹನೆ ಹಾಗೂ ಶ್ರಮದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ನಿಮ್ಮ ಬದುಕು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬೆಟ್ಟದಪುರ ಎಸ್ಎಮ್ಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ ವಿ ಮಂಜುನಾಥ್ ತಿಳಿಸಿದರು.

 ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಸ್ಎಂಎಸ್ ಪ್ರೌಢಶಾಲೆಯಲ್ಲಿ ನಡೆದ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಮನಾದ ಅವಕಾಶ ನೀಡಿ ರಾಜ್ಯ ಮಟ್ಟದವರೆಗೂ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಇಂದು ಸಾಂಸ್ಕೃತಿಕ ವೇದಿಕೆ ಉದ್ಘಾಟನೆಗೊಂಡಿದ್ದು ಪ್ರತಿ ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರಚಲ್ಲ ಬೇಕು ಎಂದರು.

 ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎವಿ ಛಾಯಾ, ಮುಖ್ಯ ಶಿಕ್ಷಕರಾದ ಎಸ್ ಆರ್ ವೆಂಕಟೇಶ್, ಡಿ ಎನ್ ಸ್ವಾಮಿ, ಶಿಕ್ಷಕರಾದ ರೂಪ,ಅಂಜನಾ,ತೇಜಸ್ವಿನಿ, ರಮ್ಯ, ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular