ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ಕಾರಿ ಸೇವೆಯಲ್ಲಿ ಇರುವ ಎಲ್ಲಾ ನೌಕಕರರು ಜನರಿಗೆ ತಮ್ಮ ಇಲಾಖೆಯಿಂದ ಉತ್ತಮ ಸೇವೆ ಒದಗಿಸಿ ಕೊಟ್ಟಾಗ ಜನರ ಪ್ರೀತಿಗಳಿಸಲು ಸಾಧ್ಯ ಎಂದು ಸಾಲಿಗ್ರಾಮ ತಹಸೀಲ್ದಾರ್ ಎಸ್.ನರಗುಂದ ಹೇಳಿದರು.
ಚುಂಚನಕಟ್ಟೆ ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಅಗಿ ಸೇವೆ ಸಲ್ಲಿಸಿ ವಿರಾಜಪೇಟೆ ತಾಲೂಕು ಕಚೇರಿಯ ಶಿರಸ್ತೆದಾರ್ ಅಗಿ ವರ್ಗಾವಣೆ ಗೊಂಡ ಕೆ.ಜೆ.ಶರತ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಬೀಳ್ಗೊಂಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ ವೃತ್ತಿಯಲ್ಲಿ ವರ್ಗಾವಣೆ ಎಂಬುವುದು ಸಾಮಾನ್ಯವಾಗಿದ್ದರು ಕೂಡ ಇರುವ ಸಮಯದಲ್ಲಿ ಜನರ ಭಾವನೆಗಳಿಗೆ ಸ್ಪಂದಿಸಿದರೇ ಅಂತಹ ನೌಕರರ ಹೆಸರು ಜನಮಾಸದಲ್ಲಿ ಉಳಿಯುತ್ತದೆ ಈ ನಿಟ್ಟಿನಲ್ಲಿ ಶರತ್ ಅವರು ಕೆಲಸ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಜೆ.ಶರತ್ 6 ವರ್ಷಗಳ ಕಾಲ ರಾಜಸ್ವನಿರೀಕ್ಷರಾಗಿ ವರ್ಷಗಳ ಕಾಲ ಉಪತಹಸೀಲ್ದಾರ್ ಸೇವೆ ಸಲ್ಲಿಸುವ ವೇಳೆ ಮೇಲಾಧಿಕಾರಿಗಳು ಸಹಕಾರದಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿದ ತೃಪ್ತಿ ನಮಗೆ ಇದೆ ಎಂದರು.
ಈ ಸಂರ್ಭದಲ್ಲಿ ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಂಜುನಾಥ್ ಉಪತಹಸೀಲ್ದಾರ್ ಸತೀಶ್,
ರಾಜಸ್ವನಿರೀಕ್ಷಕ ಚಿದನಂದಬಾಬು, ಗ್ರಾಮ ಆಡಳಿತಾಧಿಕಾರಿಗಳಾದ ನಾಗರಾಜು, ಮೇಘ, ಮೌನೇಶ್, ಕಾವೇರಿ,ಪ್ರಿಯಾ, ಶಿವಕುಮಾರ್, ಸಿಬ್ಬಂದಿಗಳಾದ ಭಾಗ್ಯ, ಮಧುಶ್ರೀ ಕೆಸ್ತೂರು ವಿಜಿ, ಆರ್.ಕಾರ್ತಿಕ್, ಗ್ರಾಮಸಹಾಯಕರಾದ ಅನಿಲ್, ಕರ್ತಾಳ್ ಕುಮಾರ್ , ಸೋಮಶೇಖರ್, ರವೀಂದ್ರ,ರವೀಶ್, ತೇಜವಮೂರ್ತಿ, ಮಹೇಶ್, ಚನ್ನಯ್ಯ,ವಸಂತಕುಮಾರ್, ಮುಖಂಡರಾದ ಸಾಲೇಕೊಪ್ಪಲು ಅನಿಲ್,ಹೇಮಣ್ಣ
ಸೇರಿದಂತೆ ಮತ್ತಿತರರು ಹಾಜರಿದ್ದರು.