Wednesday, April 9, 2025
Google search engine

Homeರಾಜ್ಯಸುದ್ದಿಜಾಲಮಹನೀಯರ ತತ್ವ-ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರ ಜೀವನ ಸಾರ್ಥಕ: ಶಾಸಕ ಡಿ.ರವಿಶಂಕರ್

ಮಹನೀಯರ ತತ್ವ-ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರ ಜೀವನ ಸಾರ್ಥಕ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಮಹನೀಯರು ನಮಗೆ ಹಾಕಿಕೊಟ್ಟಿರುವ ತತ್ವ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರ ಜೀವನ ಸಾರ್ಥಕವಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಕೆ.ಆರ್.ನಗರ ತಾಲೂಕು ಆಡಳಿತ ಮತ್ತು ತಾಲೂಕು ಕುರುಬರ ಸಂಘದ ವತಿಯಿಂದ ಪಟ್ಟಣದ ಕಾಗಿನೆಲೆ ಮಠದ ಆವರಣದಲ್ಲಿ ನಡೆದ ಭಕ್ತ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನಕದಾಸರು ಕುಲ ಕುಲವೆಂದು ಹೊಡೆದಾಡಬೇಡಿ ಎಂದು ಸಂದೇಶ ನೀಡಿದ್ದು ಇದನ್ನು ಎಲ್ಲರೂ ಅರಿಯಬೇಕೆಂದರು.

ನಾವು ಒಂದೆ ಜಾತಿಗೆ ಸೀಮಿತರಾಗದೆ ಎಲ್ಲರೊಳಗೊಂದು ಎಂಬ ಸಿದ್ದಾಂತವನ್ನು ಅನುಸರಿಸಿ ಸಂತ ಕವಿಗಳ ಆಶಯದಂತೆ ನಡೆದುಕೊಂಡು ಆ ಯುಗಪುರುಷನಿಗೆ ಗೌರವ ಸಲ್ಲಿಸಬೇಕೆಂದು ತಿಳಿಸಿದರು.

ಭಕ್ತ ಕನಕದಾಸರು ಸೇರಿದಂತೆ ಸಮಾಜ ಸುಧಾರಕರು ಮತ್ತು ಇತರ ಮಹನೀಯರು ಸಮಾಜದ ಏಳಿಗೆಗೆ ತಮ್ಮದೆ ಆದ ಕೊಡುಗೆ ನೀಡಿರುವುದರಿಂದ ನಾವೆಲ್ಲಾ ಅವರ ಮಾರ್ಗದಲ್ಲಿ ಸಾಗಿ ಜಾತ್ಯಾತೀತ ಸಮಾಜ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರ ಸಲಹೆಯಂತೆ ಮುಂದಿನ ವರ್ಷದಿಂದ ಪಟ್ಟಣದ ಪುರಸಭೆಯ ಡಾ.ರಾಜಕುಮಾರ ಸಾಂಸ್ಕೃತಿಕ ಭಾನಂಗಳದಲ್ಲಿ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಆಚರಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

ಕಾಗಿನೆಲೆ ಮೈಸೂರು ಶಾಖಾ ಮಠದ ಶಿವಾನಂದಪುರಿ ಶ್ರೀಗಳು ಆಶೀರ್ವಚನ ನೀಡಿದರು. ಮಡಿಕೇರಿ ತಾಲೂಕು ಬಿಇಒ ಡಾ.ಬಿ.ಸಿ.ದೊಡ್ಡೇಗೌಡ ಭಕ್ತ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಆನಂತರ ಕನ್ನಡಪ್ರಭ ವರದಿಗಾರ ಕುಪ್ಪೆಮಹದೇವಸ್ವಾಮಿ, ಪತ್ರಕರ್ತರ ಸಂಘದ ಖಜಾಂಚಿ ನಾಗೇಶ್, ಉದಯವಾಣಿ ವರದಿಗಾರ ಜಿ.ಕೆ.ನಾಗಣ್ಣ ಸೇರಿದಂತೆ ಇತರ ಸಾಧಕರಿಗೆ ಕನಕಶ್ರೀ ಪ್ರಶಸ್ತಿ ನೀಡುವುದರ ಜತೆಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪರವಾಗಿ ಅವರ ಪೋಷಕರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮೊದಲು ಪಟ್ಟಣದ. ಹಾಸನ-ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಪ್ರತಿಮೆಯ ಬಳಿಯಿಂದ ಭಕ್ತ ಕನಕದಾಸರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ವಿವಿದ ಸಾಂಸ್ಕೃತಿಕ ಕಲಾ ತಂಡಗಳ ಜತೆ ಮರವಣಿಗೆ ಮಾಡಲಾಯಿತು‌.

ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಜೆ.ಶಿವಣ್ಣ, ಉಪಾಧ್ಯಕ್ಷ ಸಾಕರಾಜು, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರಾದ ಕೆ.ಎಚ್.ಬುಡೀಗೌಡ, ಜೆ. ಕೃಷ್ಣೇಗೌಡ, ಎಂ.ಎಸ್.ಅನಂತ್, ದೇವರಾಜು, ಜಿಲ್ಲಾ ನಿರ್ದೇಶಕರಾದ ದಿಡ್ಡಹಳ್ಳಿಬಸವರಾಜು, ಜಿ.ಎಂ.ಹೇಮಂತ್, ಜಿ.ಪಂ.ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಪುರಸಭೆ ಸದಸ್ಯರಾದ ನಟರಾಜು, ಪ್ರಕಾಶ್, ಶಿವುನಾಯಕ್, ಬೇರ್ಯ ಗ್ರಾ.ಪಂ.ಅಧ್ಯಕ್ಷ ಮಂಜಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಗ್ಯಾರಂಟಿ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಮಾಲೇಗೌಡ, ತಾಲೂಕು ಕುರುಬ ಸಮಾಜದ ಮುಖಂಡರಾದ ಗರುಡಗಂಭದಸ್ವಾಮಿ, ಕೆಂಪನಕೊಪ್ಪಲುಜಗದೀಶ್, ರೈತ ಮುಖಂಡ ಎಂ.ಜೆ.ರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ತಹಸೀಲ್ದಾರರಾದ ಸೋಮನಗೌಡ ಎಸ್. ನರಗುಂದ, ಜೆ.ಸುರೇಂದ್ರಮೂರ್ತಿ, ಬಿಇಒ ಆರ್. ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸೇರಿದಂತೆ ಕುರುಬ ಸಮಾಜದ ಮುಖಂಡರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನಾಡಿನ ವಿಭೂತಿ ಪುರುಷರು ತಮ್ಮ ಮಾತು ಮತ್ತು ಕೃತಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು ಅಂತಹ ಉತ್ತಮ ಕೆಲಸವನ್ನು 500 ವರ್ಷಗಳ ಹಿಂದೆಯೆ ಭಕ್ತ ಕನಕದಾಸರು ಮಾಡಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಕೆ.ಆರ್.ನಗರ ತಾಲೂಕು ಆಡಳಿತ ಮತ್ತು ತಾಲೂಕು ಕುರುಬರ ಸಂಘದ ವತಿಯಿಂದ ಪಟ್ಟಣದ ಕಾಗಿನೆಲೆ ಮಠದ ಆವರಣದಲ್ಲಿ ನಡೆದ ಭಕ್ತ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶತಮಾನಗಳ ಹಿಂದೆಯೆ ಸಮಾನತೆಯ ಸಮಾಜದ ನಿರ್ಮಾಣಕ್ಕೆ ದುಡಿದ ಆ ಮಹನೀಯ ಅಜರಾಮರ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಕಾಲವು ಜನರದೆ ಹೊರತು ಮತ್ಯಾರದು ಅಲ್ಲಾ ಎಂದ ಅವರು ನನ್ನನ್ನು ಸೇರಿಸಿದಂತೆ ಇಂದಿನ ಚುನಾಯಿತ ಜನ ಪ್ರತಿನಿಧಿಗಳು ಬಸವಣ್ಣನ ಕಾಯಕ ತತ್ವವನ್ನು ಎಷ್ಠು ಮಂದಿ ಅನುಸರಿಸುತ್ತಿದ್ದೇವೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ವರ್ಷಕ್ಕೆ 35 ಜಯಂತಿಗಳ ಜತೆಗೆ 230 ವಿವಿದ ರಜೆಗಳಿದ್ದು ಸರ್ಕಾರ 120 ದಿನಗಳಿಗೆ ತನ್ನ ನೌಕರರಿಗೆ ವರ್ಷಕ್ಕೆ 1,10 ಲಕ್ಷ ಕೋಟಿ ಸಂಬಳ ಹಾಗೂ ಸಾರಿಗೆಯ ಹಣ ನೀಡುತ್ತಿದ್ದು ಇದರಿಂದ ದೇಶದ ಅಭಿವೃದ್ದಿ ಸಾಧ್ಯವೇ ಎಂದು ಕೇಳಿದರು.

ನನ್ನ ಈ ಮನವಿ ಮತ್ತು ಸಲಹೆಯನ್ನು ರಾಜ್ಯ ಸರ್ಕಾರ ಗಂಬೀರವಾಗಿ ಪರಿಗಣಿಸಿ ಎಲ್ಲರೊಂದಿಗೆ ಚರ್ಚಿಸಿ ಎಲ್ಲಾ ಮಹನೀಯರ ಜಯಂತಿಗಳನ್ನು ಒಂದೇ ದಿನ ಆಚರಿಸಿ ಅನಗತ್ಯ ರಜೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಕಾಗಿನೆಲೆ ಪೀಠ ಆರಂಬಿಸಲು ನಾನು ಮೂರು ವರ್ಷ ಮನೆ ಮತ್ತು ಕುಟುಂಬವನ್ನು ತೊರೆದು ಅವಿರತವಾಗಿ ಕೆಲಸ ಮಾಡಿದ್ದು ಮೂಲ ಮಠದ ಜತೆಗೆ ನಾಲ್ಕು ವಿಭಾಗೀಯ ಪೀಠಗಳನ್ನು ಆರಂಬಿಸಿದ್ದು ಅದನ್ನು ಈಗಿನವರು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ತಿಳಿಸಿದರು.

RELATED ARTICLES
- Advertisment -
Google search engine

Most Popular