ಹೊಸದಿಲ್ಲಿ: ಅಕ್ರಮ ವಲಸಿಗರಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಚಾರದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ವಿಶೇಷವಾಗಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಾಂಗ್ಲಾದೇಶಿ ವಲಸಿಗರ ಹಾವಳಿಯಿಂದಾಗಿ ಅಸ್ಸಾಂ ರಾಜ್ಯವು ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಶಾಂತಿ ಎದುರಿಸುತ್ತಿದೆ ಎಂದು 2005 ರಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಈ ಅಕ್ರಮ ವಲಸಿಗರು ಭಾರತಕ್ಕೆ ಬಂದ ನಂತರ, ಅವರ ಆಹಾರ, ಆಶ್ರಯ ಮತ್ತು ತಮ್ಮ ಮಕ್ಕಳಿಗಾಗಿ ಸಹಾಯ ಕೇಳುತ್ತಾರೆ. ಆದರೆ ನಮ್ಮ ದೇಶದಲ್ಲಿ ಅನೇಕ ಬಡವರಿದ್ದಾರೆ. ದೇಶದ ಸಂಪನ್ಮೂಲಗಳ ಮೇಲೆ ಅವರಿಗೆ ಹಕ್ಕಿದೆ, ಅಕ್ರಮ ವಲಸಿಗರಿಗೆ ಅಲ್ಲ. ನಿಜ, ಅಕ್ರಮ ವಲಸಿಗರನ್ನು ಚಿತ್ರಹಿಂಸೆಗೆ ಗುರಿಪಡಿಸಲಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಈ ಹೇಳಿಕೆಯೂ, ಮಾಯನ್ಮಾರ್ ನ ರಾಖೈನ್ ಪ್ರಾಂತ್ಯದಲ್ಲಿ ವಾಸಿಸುವ ರೋಹಿಂಗ್ಯಾಗಳನ್ನು ಅಲ್ಲಿನ ಸರ್ಕಾರವು ಬಂಗಾಳಿ ಆಕ್ರಮಣಕಾರರು ಮತ್ತು ಮಾಯನ್ಮಾರ್ ನಾಗರಿಕರು ಅಲ್ಲ ಎಂದು ಪರಿಗಣಿಸಿ, ಅವರನ್ನು ಶರಣಾರ್ಥಿಗಳೆಂದು ಗುರುತಿಸುವಂತೆ ಕೆಲವು ಕಡೆಯಿಂದ ಹೆಚ್ಚುತ್ತಿರುವ ಬೇಡಿಕೆಯ ನಡುವೆ ಬಂದಿದೆ. ಮಾಯನ್ಮಾರ್ನಿಂದ ಪಲಾಯನ ಮಾಡಿ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳು ಪಶ್ಚಿಮ ಬಂಗಾಳಕ್ಕೂ ನುಸುಳುತ್ತಿರುವ ನಿದರ್ಶನಗಳಿವೆ ಎಂದು ಹೇಳಿಸದರು
ಈ ಬಗ್ಗೆ ವಿಚಾರಣೆ ಮುಂದೂಡಿಕೆಯಾಗಿದ್ದು, ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೆಬಿಯಸ್ ಕಾರ್ಪಸ್ ಅರ್ಜಿಯ ನೆಪದಲ್ಲಿ, ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆಯ ವಿವರಗಳು, ಈ ವಿಷಯದ ಬಗ್ಗೆ ಭಾರತವು ಇತರ ದೇಶಗಳೊಂದಿಗೆ ನಡೆಸಿದ ಮಾತುಕತೆಗಳು ಮತ್ತು ಈ ವಿಷಯದ ಕಡತಗಳ ವಿಷಯಗಳನ್ನು ಬಹಿರಂಗಪಡಿಸಲು ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರೋಹಿಂಗ್ಯಾ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಇತರ ಪ್ರಕರಣಗಳ ವಿಚಾರಣೆಯನ್ನು ಡಿಸೆಂಬರ್ ೧೬ ಕ್ಕೆ ಮುಂದೂಡಲಾಗಿದೆ.
2005 ರ ‘ಸರ್ಬಾನಂದ ಸೋನೋವಾಲ್’ ಪ್ರಕರಣದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಹೀಗೆ ಹೇಳಿತ್ತು: ಬಾಂಗ್ಲಾದೇಶಿ ರಾಷ್ಟ್ರೀಯರ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ಅಸ್ಸಾಂ ರಾಜ್ಯವು ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಶಾಂತಿ’ಯನ್ನು ಎದುರಿಸುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ, ಸಂವಿಧಾನದ ೩೫೫ ನೇ ವಿಧಿಯ ಅಡಿಯಲ್ಲಿ ಅಂತಹ ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಶಾಂತಿಯಿಂದ ಅಸ್ಸಾಂ ರಾಜ್ಯವನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು ಭಾರತ ಒಕ್ಕೂಟದ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ವಿಷಯದ ಬಗ್ಗೆ ಭಾರತದ ನಿಲುವನ್ನು ನೋಡುವುದಾದರೇ ಮೇ 8 ರಂದು, ನ್ಯಾಯಮೂರ್ತಿಗಳಾದ ಕಾಂತ್, ದೀಪಂಕರ್ ದತ್ತಾ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ದೆಹಲಿಯಿಂದ ಅಕ್ರಮ ರೋಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡುವುದನ್ನು ತಡೆಯಲು ನಿರಾಕರಿಸಿತ್ತು. ವಕೀಲರಾದ ಕಾಲಿನ್ ಗೊನ್ಸಾಲ್ವಿಸ್ ಮತ್ತು ಪ್ರಶಾಂತ್ ಭೂಷಣ್ ಅವರು, ಈ ವಲಸಿಗರು ಮ್ಯಾನ್ಮಾರ್ನಲ್ಲಿ ಜನಾಂಗೀಯ ಹತ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ಭಾರತದಲ್ಲಿ ಉಳಿಯುವ ಹಕ್ಕನ್ನು ಹೊಂದಿದ್ದಾರೆ ಎಂದು ವಾದಿಸಿದ್ದರು.
ಆದರೆ, ಭಾರತದಲ್ಲಿ ಎಲ್ಲಿಯಾದರೂ ವಾಸಿಸುವ ಹಕ್ಕು ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ ಮತ್ತು ವಿದೇಶಿಯರನ್ನು ವಿದೇಶಿಯರ ಕಾಯ್ದೆಯ ಪ್ರಕಾರ ನಿರ್ವಹಿಸಲಾಗುವುದು ಎಂದು ನ್ಯಾಯಾಲಯ ಹೇಳಿತ್ತು. ಈ ಎಲ್ಲಾ ಬೆಳವಣಿಗೆಗಳು, ಅಕ್ರಮ ವಲಸಿಗರ ವಿಷಯದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸುತ್ತವೆ. ದೇಶದ ಸಂಪನ್ಮೂಲಗಳು ಮೊದಲು ದೇಶದ ನಾಗರಿಕರಿಗೇ ಮೀಸಲು, ಅಕ್ರಮವಾಗಿ ಬರುವವರಿಗೆ ಅಲ್ಲ ಎಂಬುದು ಸುಪ್ರೀಂ ಕೋರ್ಟ್ನ ಸ್ಪಷ್ಟ ಸಂದೇಶವಾಗಿದೆ. ರೋಹಿಂಗ್ಯಾಗಳಂತಹ ಅಕ್ರಮ ವಲಸಿಗರ ವಿಷಯದಲ್ಲಿ, ಮಾನವೀಯ ದೃಷ್ಟಿಕೋನವಿದ್ದರೂ, ದೇಶದ ಕಾನೂನು ಮತ್ತು ನಾಗರಿಕರ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಈ ತೀರ್ಪುಗಳು ಎತ್ತಿ ತೋರಿಸುತ್ತವೆ ಎಂದು ತಿಳಿಸಿದರು.



