Tuesday, June 10, 2025
Google search engine

Homeರಾಜ್ಯಸುದ್ದಿಜಾಲಕೌಟುಂಬಿಕ ಸಮಸ್ಯೆಗಳಲ್ಲಿ ಕೂಸು ಬಡವಾಯ್ತು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಮರಸ್ಯ ಮುಖ್ಯ

ಕೌಟುಂಬಿಕ ಸಮಸ್ಯೆಗಳಲ್ಲಿ ಕೂಸು ಬಡವಾಯ್ತು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಮರಸ್ಯ ಮುಖ್ಯ

ದಾವಣಗೆರೆ: ಗಂಡ ಹೆಂಡಿರ ಮಧ್ಯದಲ್ಲಿನ ಜಗಳದಿಂದಾಗಿ ಮಕ್ಕಳ ಭವಿಷ್ಯವು ಕೂಡಾ ಮಂಕಾಗುತ್ತಿರುವುದು ವಿಷಾದನಿಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣನವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಕಚೇರಿ ಸಭಾಂಗಣದ ಏರ್ಪಡಿಸಲಾಗಿದ್ದ ಡಿ.ವಿ.ಆಕ್ಟ್ ಕಾಯ್ದೆ ಕುರಿತು ಭಾಗಿದಾರ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ 2 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತಾನಾಡಿದರು. ಇತ್ತಿಚೀನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದ್ದು, ಕುಟುಂಬದ ಸದಸ್ಯರ ಮಧ್ಯದಲ್ಲಿನ ಸಾಮರಸ್ಯ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಕೌಟುಂಬಿಕ ಸಮಸ್ಯೆಗಳು ಬಂದಾಗ ತಕ್ಷಣ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು
ಕಾನೂನಿನ ಅವಶ್ಯಕತೆ ಇದ್ದವರು ಸದುಪಯೋಗ ಪಡೆಯಬೇಕಾಗಿರುತ್ತದೆಯಾದರೂ, ಕೆಲವೊಂದು ಪ್ರಕರಣಗಳಲ್ಲಿ ಕಾನೂನನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುತ್ತದೆ. ಯಾವುದೇ ಕಾರಣಕ್ಕೂ ಕಾನೂನಿನ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾತಾನಾಡಿ ಸಮಾಜದ ಸ್ವಾಸ್ತ್ಯ ಉತ್ತಮವಾಗಿರಬೇಕೆಂದರೆ ಕುಟುಂಬದಲ್ಲಿ ಶಾಂತಿ ಇರಬೇಕು. ಮಹಿಳೆಗೆ ಏನಾದರೂ ತೊಂದರೆಯಾದಾಗ ಸ್ವಾಧಾರ ಕೇಂದ್ರದಲ್ಲಿ, ರಾಜ್ಯ ಮಹಿಳಾ ನಿಲಯದಲ್ಲಿ ಅವಳಿಗೆ ಆಶ್ರಯ ನೀಡಿ ಆಪ್ತ ಸಮಾಲೋಚನೆ ನಡೆಸಿ ಪುನರ್‍ವಸತಿ ಕಲ್ಪಿಸಲು ಅವಕಾಶವಿದೆ. ಇದು ಆಂತರಿಕ ಬೆಳವಣಿಗೆ ಆಗಿದ್ದು, ಇತ್ತೀಚಿಗೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಗುವುದರ ಜೊತೆಗೆ ಭವಿಷ್ಯವೇ ಹಾಳಾಗುತ್ತಿರುವುದು ವರದಿಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಸಮಸ್ಯೆಗೆ ಒಳಗಾದವರು ತಮ್ಮ ನೋವನ್ನು ತೋಡಿಕೊಳ್ಳಲು ಯಾರೂ ಸಿಗದೇ ಬಳಲುವುದು ಎಂದು ತಿಳಿದು ಬರುತ್ತದೆ.

ಜಿಲ್ಲಾ ಆರೋಗ್ಯ ಇಲಾಖೆ ಡಾ.ಶಿವಕುಮಾರ ಮಾತಾನಾಡಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಮುಖ್ಯಕಾರಣ, ಮಾನಸಿಕ ಆರೋಗ್ಯ ಹದಗೆಟ್ಟಾಗ ಸಮಾಲೋಚಕರು ಅಥವಾ ಮನೋವೈದ್ಯರ ಬಳಿ ಹೋಗುವುದು ಸೂಕ್ತ ಇದಕ್ಕಾಗಿ ಹಿಂಜರಿಯಬಾರದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular