ನವದೆಹಲಿ: ಪಹಲ್ಗಾಮ್ನಲ್ಲಿ ನಡೆದ ದಾಳಿಯ ಬಳಿಕ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಭಾರತ, ಈಗ 1972ರ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿನಿಂದ ಪಾಕ್ ಧ್ವಜವನ್ನು ತೆಗದು ಹಾಕಿದೆ.
ಒಪ್ಪಂದಕ್ಕೆ ಸಹಿ ಹಾಕಲಾದ ಹೊಳಪುಳ್ಳ ಮರದ ಮೇಜನ್ನು ಶಿಮ್ಲಾದ ರಾಜಭವನದ ಕೀರ್ತಿ ಹಾಲ್ನಲ್ಲಿ ಇರಿಸಲಾಗಿದೆ. ಈ ಮೇಜು ಎತ್ತರದ ಕೆಂಪು ಬಣ್ಣದ ವೇದಿಕೆಯ ಮೇಲೆ ಇದ್ದು, “ಸಿಮ್ಲಾ ಒಪ್ಪಂದಕ್ಕೆ 3-7-1972 ರಂದು ಇಲ್ಲಿ ಸಹಿ ಹಾಕಲಾಯಿತು” ಎಂದು ಬರೆದಿರುವ ಫಲಕವನ್ನು ಹೊಂದಿದೆ. ಈ ಪ್ರದೇಶವು ಹಿತ್ತಾಳೆಯ ಬೇಲಿಗಳಿಂದ ಸುತ್ತುವರಿಯಲ್ಪಟ್ಟಿದೆ.
ಸಿಮ್ಲಾ ಒಪ್ಪಂದ ಎಂದರೇನು?
ಡಿಸೆಂಬರ್ 16, 1971 ರಂದು, ಎರಡು ವಾರಗಳ ಕಾಲ ನಡೆದ ಯುದ್ಧಗಳ ನಂತರ, 90,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಶರಣಾದರು. ಇದು ಪಶ್ಚಿಮ ವಲಯದಲ್ಲಿಯೂ ಕದನ ವಿರಾಮಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ ಯುದ್ಧ ಕೊನೆಗೊಂಡು ಭಾರತದ ಗೆಲುವು ಮತ್ತು ಬಾಂಗ್ಲಾದೇಶದ ಜನನವಾಯಿತು. ಸಿಮ್ಲಾ ಒಪ್ಪಂದವು ಜುಲೈ 3, 1972 ರಂದು ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ನಡುವೆ ಸಹಿ ಹಾಕಲಾದ ಶಾಂತಿ ಒಪ್ಪಂದವಾಗಿತ್ತು. ಇದು “ಇಲ್ಲಿಯವರೆಗೆ ಅವರ ಸಂಬಂಧಗಳನ್ನು ಹಾಳುಮಾಡಿರುವ ಸಂಘರ್ಷ ಮತ್ತು ಮುಖಾಮುಖಿಯನ್ನು ಕೊನೆಗಾಣಿಸುವುದು ಮತ್ತು ಸ್ನೇಹಪರ ಮತ್ತು ಸಾಮರಸ್ಯದ ಸಂಬಂಧವನ್ನು ಉತ್ತೇಜಿಸಲು ಮತ್ತು ಉಪಖಂಡದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕೆಲಸ ಮಾಡುವುದು” ಇದರ ಗುರಿಯಾಗಿದೆ.