ದೆಹಲಿಯಿಂದ ಲೇಹ್ಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ದೆಹಲಿಯಲ್ಲೇ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ದೋಷದ ಸ್ವಭಾವದ ಕುರಿತು ಇಂಡಿಗೋ ಅಧಿಕೃತ ಮಾಹಿತಿ ನೀಡಿಲ್ಲ.
ಇದೇ ಸಂದರ್ಭದಲ್ಲಿ ರಾಯ್ಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ತಾಂತ್ರಿಕ ದೋಷದಿಂದ ದೆಹಲಿ-ರಾಯ್ಪುರ ಇಂಡಿಗೋ ವಿಮಾನದ ಬಾಗಿಲು ಜಾಮ್ ಆಗಿ, ಪ್ರಯಾಣಿಕರು 40 ನಿಮಿಷ ವಿಮಾನದೊಳಗೆ ಸಿಲುಕಿದ್ದರು.
ಮಂಗಳವಾರ ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಪರಿಣಾಮ ನಾಗ್ಪುರದಲ್ಲಿ ತುರ್ತು ಲ್ಯಾಂಡ್ ಮಾಡಲಾಯಿತು.
ಸೋಮವಾರ ಗೋವಾದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನವು ಹವಾಮಾನ ವೈಪರೀತ್ಯದಿಂದ ಟೇಕಾಫ್ ಆದ ತಕ್ಷಣವೇ ತುರ್ತು ಭೂಸ್ಪರ್ಶ ನಡೆಸಿತು.
ಇತ್ತೀಚಿನ ಈ ಸತತ ಘಟನೆಗಳಿಂದ ವಿಮಾನಯಾನ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ.