Sunday, April 20, 2025
Google search engine

Homeರಾಜ್ಯಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುವುದೇ ಉತ್ತಮ: ಪ್ರತಾಪ್ ಸಿಂಹ

ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುವುದೇ ಉತ್ತಮ: ಪ್ರತಾಪ್ ಸಿಂಹ

ಬಳ್ಳಾರಿ: ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುವುದೇ ಉತ್ತಮ, ಅವರು ಮುಂದುವರಿದರೆ ಕಾಂಗ್ರೆಸ್ ಪಕ್ಷದ ದುರಾಡಳಿತ, ಭ್ರಷ್ಟಾಚಾರ ಎಲ್ಲ ಸಂಗತಿಗಳು ಜನಕ್ಕೆ ಗೊತ್ತಾಗುತ್ತವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸಂಡೂರಿನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹಣಮಂತು ಪರ ಪ್ರಚಾರ ಮಾಡುತ್ತಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಡೂರಿಗೆ ಉಪ ಚುನಾವಣೆ ನಡೆಯುವಂತಾಗಿದ್ದೇ ಅಕ್ರಮ, ಇಲ್ಲಿನ ಶಾಸಕರಾಗಿದ್ದ ಈ ತುಕಾರಾಂ ಸಂಸದರಾಗಿ ಅಯ್ಕೆಯಾಗಲು ವಾಲ್ಮೀಕಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡರು, ಕ್ಷೇತ್ರದಿಂದ ವಿಧಾನಸಭೆಗೆ ೪ ಬಾರಿ ಚುನಾಯಿತರಾದರೂ ಅಭಿವೃದ್ಧಿ ಕಾರ್ಯಗಳ್ಯಾವೂ ಮಾಡಿಲ್ಲ, ಬಿಜೆಪಿ ಅಭ್ಯರ್ಥಿ ಗೆಲ್ಲೋದು ನಿಶ್ಚಿತ ಎಂದು ತಿಳಿಸಿದರು.

ಮುಡಾ ಹಗರಣದಲ್ಲಿ ದಲಿತನೊಬ್ಬನಿಗೆ ಸೇರಿದ ಜಮೀನು ಜಾತಿಯಲ್ಲಿ ಕುರುಬರಾಗಿರುವ ಸಿದ್ದರಾಮಯ್ಯನವರಿಗೆ ಹೇಗೆ ಸೇರುತ್ತದೆ ಎಂದು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular