Wednesday, June 25, 2025
Google search engine

Homeಸ್ಥಳೀಯಜಯದೇವ ಹೃದ್ರೋಗ ಆಸ್ಪತ್ರೆಯಿಂದ ಪತ್ರಕರ್ತರು ಹಾಗೂ ಕುಟುಂಬದವರಿಗಾಗಿ ಹೃದಯ ತಪಾಸಣಾ ಶಿಬಿರ.

ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಪತ್ರಕರ್ತರು ಹಾಗೂ ಕುಟುಂಬದವರಿಗಾಗಿ ಹೃದಯ ತಪಾಸಣಾ ಶಿಬಿರ.

ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಏಕೆ? – ಜಯದೇವ ಆಸ್ಪತ್ರೆಯಿಂದ ಸಮೀಕ್ಷೆ ಪ್ರಾರಂಭ -ಡಾ.ಕೆ.ಎಸ್.ಸದಾನಂದ

ಮೈಸೂರು: ಚಿಕ್ಕವಯಸ್ಸಿನಲ್ಲಿಯೇ ಆಗುತ್ತಿರುವ ಹೃದಯಾಘಾತಗಳ ಕುರಿತು ವರದಿ ಸಿದ್ಧ ಪಡಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ತಿಳಿಸಿದರು.
ಮೈಸೂರು ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಬುಧವಾರ ಆಯೋಜಿಸಿದ್ದ ಹೃದಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೇ ಹೃದಯಾಘಾತ ಹೆಚ್ಚುತ್ತಿದೆ. ನಿತ್ಯ 3-4 ಜನರು ಅಂಜಿಯೋಗ್ರಾಂ ಮಾಡಿ ಚಿಕಿತ್ಸೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಏನೆಂದು ತಿಳಿಯಬೇಕಿದೆ ಎಂದರು. ಹೃದಯಾಘಾತಕ್ಕೆ ಕೋವಿಡ್ ಬಂದಿವುದಾ, ಬದಲಾದ ಜೀವನ ಶೈಲಿಯಾ ಅಥವಾ ಹೆಚ್ಚು ಶುಗರ್ ಇರುವುದಾ ಎಂದು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಅದರಂತೆ ಮೈಸೂರಿನಲ್ಲಿಯೂ ನಾವು ವೈದ್ಯರ ಅಸೋಸಿಯೇಷನ್‌ನಿಂದ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಹೃದಯಾಘಾತಕ್ಕೆ ಒಳಗಾದ 40 ವರ್ಷದೊಳಗಿನವರ ಚಿಕಿತ್ಸೆ, ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮುಂದಿನ ತಿಂಗಳಲ್ಲಿ ಹೃದಯಾಘಾತಕ್ಕೆ ನಿಖರ ಕಾರಣ ಪತ್ತೆಯ ವರದಿ ತಯಾರಿಸಲು ಪ್ರಾರಂಭಿಸಲಿದ್ದು, ಒಂದು ವರ್ಷದಲ್ಲೇ ವರದಿ ತಯಾರಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಹೃದಯಾಘಾತ ಎನ್ನುವುದು ಕೊನೆ ಕ್ಷಣದ ವರೆವಿಗೂ ತಿಳಿಯುವುದಿಲ್ಲ. ಏಕಾಏಕಿ ಸಂಭವಿಸಿದಾಗ ಅಗುವ ಹಾನಿ ತಪ್ಪಿಸಲು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅದಕ್ಕಾಗಿ ಜಯದೇವ ಆಸ್ಪತ್ರೆಯಿಂದಲೂ ಜನರಿಗೆ ಉಪಯೋಗವಾಗುವ ದೃಷ್ಠಿಯಿಂದ ಉಚಿತ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಈ ಮೂಲಕ ಹೃದಯಾಘಾತ ಕಡಿಮೆ ಮಾಡಿಕೊಳ್ಳಲು ಸಹಕಾರಿ ಅಗುತ್ತಿದೆ ಎಂದರು.

ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ್ ಮಾತನಾಡಿ, ನಮ್ಮ ಪೂರ್ವೀಕರ ಹೇಳಿಕೆಯಂತೆ ವೈದ್ಯರು ಹಾಗೂ ಶಿಕ್ಷಕರ ಋಣ ತೀರಿಸಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆ ದೇವರ ಸ್ಥಾನವಿದ್ದಂತೆ, ಅದರಲ್ಲೂ ಜಯದೇವ ಹೃದ್ರೋಗ ಆಸ್ಪತ್ರೆ ದೇಶವೇ ತಿರುಗಿ ನೋಡುವ ರೀತಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರ ಒತ್ತಡದ ಜೀವನ ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಎಲ್ಲ ವಯಸ್ಸಿನವರು ಸಹ ಎಚ್ಚರಿಕೆ ವಹಿಸಬೇಕಾಗಿದೆ. ವಯಸ್ಸಿಗೂ ಆರೋಗ್ಯಕ್ಕೂ ಸಂಬಂಧವಿಲ್ಲ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಆರೋಗ್ಯ ಕಾಳಜಿಯಲ್ಲಿ ಇಂತಹ ಶಿಬಿರಗಳು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಯದೇವ ಆಸ್ಪತ್ರೆ ಎಲ್ಲರಿಗೂ ಸಂಜೀವಿನಿ ಇದ್ದಂತೆ. ಈ ಆಸ್ಪತ್ರೆ ಇಲ್ಲದಿದ್ದರೆ ಅನೇಕ ಮಂದಿ ಬೇರೆ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಆಸ್ತಿ, ಒಡವೆ ಮಾರಿಕೊಳ್ಳುವ ಸ್ಥಿತಿ ನಿರ್ಮಾಣ ಆಗುತ್ತಿತ್ತು. ಸಿಎಂ ಸಿದ್ದರಾಮಯ್ಯನವರ ಕಾಳಜಿ ಅಂದಿನ ಶಾಸಕ ವಾಸು ಅವರ ದೂರದೃಷ್ಠಿತ್ವದ ಫಲವಾಗಿ ನಾವಿಂದು ಕಡಿಮೆ ವೆಚ್ಚದಲ್ಲಿ ಈ ಸೇವೆ ಪಡೆಯುತ್ತಿದ್ದೇವೆ ಎಂದರು.

ಆಸ್ಪತ್ರೆಯ ವೈದ್ಯರಾದ ಡಾ.ಶಾಂಭವಿ, ಡಾ.ಪ್ರಭುಚಂದ್ರ, ನರ್ಸಿಂಗ್ ಸೂಪರಿಂಟೆಂಡೆಂಟ್ ಯೋಗನಂದ, ಪಿಆರ್‌ಒ ಪ್ರಿಯಾ, ಪತ್ರಕರ್ತರಾದ ಎಂ.ಆರ್.ಸತ್ಯನಾರಾಯಣ, ಸಿ.ಎಂ.ಕಿರಣ್‌ಕುಮಾರ್, ಆರ್.ಕೃಷ್ಣ, ಎಂ.ಸುಬ್ರಹ್ಮಣ್ಯ, ಬಿ. ರಾಘವೇಂದ್ರ, ನೇರಳೆ ಬಸವರಾಜು, ವಿತರಕರ ಸಂಘದ ಅಧ್ಯಕ್ಷ ಸುರೇಶ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಅಧಿಕೃತ ಏಜೆಂಟರ ಸಂಘದ ಶಾಂತೇಶ್ ಇತರರು ಇದ್ದರು. ಶಿಬಿರದಲ್ಲಿ 160ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

RELATED ARTICLES
- Advertisment -
Google search engine

Most Popular