Monday, June 16, 2025
Google search engine

Homeರಾಜ್ಯಸುದ್ದಿಜಾಲಶಾಸಕ ಅನಿಲ್ ಚಿಕ್ಕಮಾದು ಹೇಳಿಕೆಗೆ ತಿರುಗೇಟು ನೀಡಿದ ಜಯಪ್ರಕಾಶ್ ಚಿಕ್ಕಣ್ಣ

ಶಾಸಕ ಅನಿಲ್ ಚಿಕ್ಕಮಾದು ಹೇಳಿಕೆಗೆ ತಿರುಗೇಟು ನೀಡಿದ ಜಯಪ್ರಕಾಶ್ ಚಿಕ್ಕಣ್ಣ

ವರದಿ: ಎಡತೊರೆ ಮಹೇಶ್

ಎಚ್.ಡಿ.ಕೋಟೆ: ಇತ್ತೀಚೆಗೆ ಅಹ್ಮದಾಬಾದ್ ನಲ್ಲಿ ನಡೆದ‌ ವಿಮಾನ ದುರಂತದ ಬಗ್ಗೆ ಕ್ಷೇತ್ರದ ಶಾಸಕ‌ ಅನಿಲ್ ಚಿಕ್ಕಮಾದು ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡುತ್ತಾರೆಯೇ ಎಂದು‌ ಪ್ರಶ್ನಿಸಿರುವ ಬಗ್ಗೆ, ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ತಿರುಗೇಟು ನೀಡಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ‌ ಅನಿಲ್ ಅನಿಲ್ ಚಿಕ್ಕಮಾದು ಅವರು ಇತ್ತೀಚೆಗೆ ನಡೆದ‌ ಅಹ್ಮದಾಬಾದ್ ದುರಂತದ ಬಗ್ಗೆ ಪ್ರಧಾನಿ‌ ನರೇಂದ್ರ ಮೋದಿ ಅವರು ರಾಜೀನಾಮೆ‌ ನೀಡುತ್ತಾರೆ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಅಪಘಾತಕ್ಕು ಅವಘಡಕ್ಕೂ ಇರುವ ವ್ಯತ್ಯಾಸವನ್ನು ಶಾಸಕರು ಅರಿಯಬೇಕು. ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಪದೇ, ಪದೇ ಅಪಘಾತಗಳು ಸಂಭವಿಸುತ್ತವೆ ಇದರ ಹೊಣೆಹೊತ್ತು ಶಾಸಕರು ರಾಜೀನಾಮೆ‌ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

ಆರ್.ಸಿ.ಬಿ ವಿಜಯಾಚರಣೆ ವೇಳೆ ಬೆಂಗಳೂರಿನಲ್ಲಿ ಅವಘಡ ಸಂಭವಿಸಿರುವುದು ರಾಜ್ಯ ಸರ್ಕಾರದ ವೈಪಲ್ಯದಿಂದಲೇ ಹೊರತು. ಪೊಲೀಸರ ಭದ್ರತಾ ವೈಪಲ್ಯದಿಂದಲ್ಲ. ವಿಮಾನ‌ ದುರಂತ ಅಪಘಾತವೇ ಹೊರತು ಅವಘಡವಲ್ಲ. ಆರ್.ಸಿ.ಬಿ ಪ್ರಕರಣವನ್ನು ಅಧಿಕಾರಿಗಳ ತೆಲೆಗೆ ಕಟ್ಟುವುದು‌ ಸರಿಯಲ್ಲ. ಯಾರನ್ನೋ ಮೆಚ್ಚಿಸುವ ಸಲುವಾಗಿ ಶಾಸಕರು ಬೆಂಗಳೂರು ಪೊಲೀಸ್ ಕಮೀಷನರ್ ದಯಾನಂದ್ ಅವರ ವಿರುದ್ಧ ಬೇಜವಾಬ್ದಾರಿ‌ ಹೇಳಿಕೆ ನೀಡಬಾರದು ಎಂದರು.

RELATED ARTICLES
- Advertisment -
Google search engine

Most Popular