ಮೈಸೂರು: ಜೆ.ಪಿ.ನಗರದಲ್ಲಿನ ಹಿಂದೂಸ್ತಾನ್ ಕಾಲೇಜಿನ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶಿ ಕೋಶದ ವತಿಯಿಂದ ನಾಳೆ ಮೇ ೧೭ರ ಬೆಳಗ್ಗೆ ೯.೩೦ಕ್ಕೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ಈಶ್ವರ್ ತಿಳಿಸಿದರು.
೨೦೧೮ ರಿಂದ ೨೩ರ ನಡುವೆ ತೇರ್ಗಡೆ ಹೊಂದಿರುವ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕ, ಸ್ನಾತಕೋತ್ತರ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಮೇಳದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಉಚಿತ ನೋಂದಣಿ ಇದ್ದು, ಭಾಗವಹಿಸಲಿಚ್ಛಿಸುವವರು ಅಗತ್ಯ ದಾಖಲಾತಿಗಳೊಡನೆ ಆಗಮಿಸಬೇಕೆಂದು ಕೋರಿದರು.