Friday, April 11, 2025
Google search engine

Homeರಾಜ್ಯಸುದ್ದಿಜಾಲಜೋಗನಹಳ್ಳಿ ಡೈರಿ ವಾರ್ಷಿಕ ಸಭೆ

ಜೋಗನಹಳ್ಳಿ ಡೈರಿ ವಾರ್ಷಿಕ ಸಭೆ

ಬೆಟ್ಟದಪುರ: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುವ ಮೇವು ತುಂಡರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಸೇರಿದಂತೆ ರಾಸುಗಳಿಗೆ ನೀಡುವ ವಿಮಾ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಮೈಮುಲ್ ವಿಸ್ತರಣಾಧಿಕಾರಿ ಶ್ರೀಕಾಂತ್ ಮಾಹಿತಿ ನೀಡಿದರು.

ಬೆಟ್ಟದಪುರ ಸಮೀಪದ ಜೋಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರು ಒಕ್ಕೂಟವು ನೀಡುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಂಘದ ಅಭಿವೃದ್ಧಿಯಲ್ಲಿ ಪಾತ್ರವಹಿಸಬೇಕು ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.

ಸಂಘದ ಅಧ್ಯಕ್ಷ ಜೆ.ಜಿ ಪ್ರಸನ್ನ ಮಾತನಾಡಿ ಈ ಬಾರಿ ಸಂಘದಲ್ಲಿ ₹4.45 ಲಕ್ಷ ನಿವ್ವಳ ಆದಾಯ ಗಳಿಸಿದೆ ಎಂದು ಸಭೆಯಲ್ಲಿ ತಿಳಿಸಿದರು, ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದರು.

ಉಪಾಧ್ಯಕ್ಷ ಅಣ್ಣಯ್ಯ, ನಿರ್ದೇಶಕರಾದ ಭಾರತ್ ಕುಮಾರ್, ಮಹೇಶ್, ಸ್ವಾಮಿ, ಅಣ್ಣಜಯ್ಯ ,ದೇವರಾಜು, ಗೌರಮ್ಮ, ಸುಧಾ,ನಾಗೇಶ್,ಬೋಮಯ್ಯ, ಕಾರ್ಯದರ್ಶಿ ಗುರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular