Friday, April 18, 2025
Google search engine

Homeರಾಜ್ಯಬಿಜೆಪಿ ಸೇರ್ಪಡೆ ವದಂತಿ: ಕಮಲ್ ನಾಥ್ ಸ್ಪಷ್ಟನೆ

ಬಿಜೆಪಿ ಸೇರ್ಪಡೆ ವದಂತಿ: ಕಮಲ್ ನಾಥ್ ಸ್ಪಷ್ಟನೆ

ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಬಿಜೆಪಿ ಸೇರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಾಂಗ್ರೆಸ್ ಸಿದ್ಧಾಂತವು ಸತ್ಯ, ಧರ್ಮ ಮತ್ತು ನ್ಯಾಯದ ಸಿದ್ಧಾಂತ. ದೇಶದ ಎಲ್ಲಾ ಧರ್ಮ, ಜಾತಿ, ಪ್ರದೇಶ, ಭಾಷೆ ಮತ್ತು ವಿಚಾರಗಳಿಗೆ ಪಕ್ಷದ ಸಿದ್ಧಾಂತದಲ್ಲಿ ಸಮಾನ ಸ್ಥಾನ ಮತ್ತು ಗೌರವವಿದೆ. ಪಕ್ಷವು ತನ್ನ ೧೩೮ ವರ್ಷಗಳ ಇತಿಹಾಸದಲ್ಲಿ ದೇಶಕ್ಕಾಗಿ ಹೋರಾಟ ಮತ್ತು ಸೇವೆಯಲ್ಲಿಯೇ ಹೆಚ್ಚಿನ ಸಮಯ ಕಳೆದಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶ ಸೇವೆಗಾಗಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಇತ್ತು. ಸ್ವಾತಂತ್ರ್ಯಾ ನಂತರ ರಾಷ್ಟ್ರ ನಿರ್ಮಾಣವೇ ಕಾಂಗ್ರೆಸ್‌ನ ಏಕೈಕ ಗುರಿ ಎಂದು ಕಮಲ್ ನಾಥ್ ತಿಳಿಸಿದ್ದಾರೆ.

ಬಿಜೆಪಿ ಸೇರುವ ಬಗ್ಗೆ ವರದಿಗಳು ಹೇಗೆ ಹರಡಿದವು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಲ್ ನಾಥ್, ನಾನು ಯಾವುದೇ ಪಕ್ಷದೊಂದಿಗೆ ನಂಟು ಹೊಂದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಆದರೆ, ವದಂತಿಗಳನ್ನು ಹರಡಲಾಗುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular