Wednesday, April 9, 2025
Google search engine

Homeಅಪರಾಧಕಲಬುರಗಿ: ಬಸ್- ಬೈಕ್ ನಡುವೆ ಡಿಕ್ಕಿ- ಇಬ್ಬರ ಸಾವು

ಕಲಬುರಗಿ: ಬಸ್- ಬೈಕ್ ನಡುವೆ ಡಿಕ್ಕಿ- ಇಬ್ಬರ ಸಾವು

ಕಲಬುರಗಿ: ಕೆಎಸ್ಆರ್ ಟಿಸಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಿಗ್ಗೆ ಕಲಬುರಗಿ- ಜೇವರ್ಗಿ ರಸ್ತೆಯ ಕೇಂದ್ರ ಕಾರಾಗೃಹ ಸಮೀಪ ಸಂಭವಿಸಿದೆ.

ಬೈಕ್ ನಲ್ಲಿ ತೆರಳುತ್ತಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಜೇವರ್ಗಿ ತಾಲ್ಲೂಕಿನ ಶಖಾಪುರ ಎಸ್ ಗ್ರಾಮದ ಅಭಿಶೇಖಗೌಡ ರಾಮಚಂದ್ರ ಗೌಡ ಮಾಲಿ ಪಾಟೀಲ್ (26), ತನುಜ್ ಶ್ರೀಮಂತ ತಳವಾರ (27) ಎನ್ನುವರೇ ಮೃತಪಟ್ಟರೆ, ಯಶಪಾಲರೆಡ್ಡಿ ವಿಜಯರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಮೇಲೆ ಮೂವರು ಕಲಬುರಗಿ ಕಡೆಗೆ ಬರುತ್ತಿದ್ದರು.

ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೊರಟಿದ್ದ ಬೈಕ್ ಎದುರಿನಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೆಂಕಿ ಹತ್ತಿ  ಬೈಕ್ ಸುಟ್ಟು ಕರಕಲಾಗಿದೆ.

ಈ ಕುರಿತು ಕಲಬುರಗಿಯ ಸಂಚಾರಿ ಪೊಲೀಸ್ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular