Saturday, June 7, 2025
Google search engine

Homeಸ್ಥಳೀಯಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾಗಿ ಕರಳಾಪುರ ನಾಗರಾಜು ಅವಿರೋಧವಾಗಿ ಆಯ್ಕೆ

ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾಗಿ ಕರಳಾಪುರ ನಾಗರಾಜು ಅವಿರೋಧವಾಗಿ ಆಯ್ಕೆ

ಮೈಸೂರು: ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾಗಿ ಕರಳಾಪುರ ನಾಗರಾಜು ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಜರ್‌ಬಾದ್ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ನಡೆದ ಮೈಸೂರು ಜಿಲ್ಲಾ ಉಪ್ಪಾರ ಸಮುದಾಯದ ಮುಖಂಡರ ಸಭೆಯಲ್ಲಿ ಕರಳಾಪುರ ನಾಗರಾಜು ಅವರನ್ನು ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಇದೇ ಸಂದರ್ಭದಲ್ಲಿ ನಡೆದ ಮೈಸೂರು ಜಿಲ್ಲಾ ಉಪ್ಪಾರ ಸಂಘದ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಎಸ್.ಮಹದೇವ್, ಕಾರ್ಯಾಧ್ಯಕ್ಷರಾಗಿ ಸಿ.ಸೋಮಣ್ಣ, ಗೌರವ ಸಲಹೆಗಾರರಾಗಿ ಪಿ.ಎಸ್.ವಿಶಕಂಠಯ್ಯ ಉಪಾಧ್ಯಕ್ಷರಾಗಿ ಪ್ರಕಾಶ್ ಪಿ., ಚಿಕ್ಕಸ್ವಾಮಿ ಕೆ.ಆರ್., ಪ್ರಧಾನ ಕಾರ್ಯದರ್ಶಿಯಾಗಿ ಜೆ.ಕೃಷ್ಣ, ಸಂಚಾಲಕರಾಗಿ ಎಲ್. ಮಲ್ಲಶೆಟ್ಟಿ, ಖಜಾಂಚಿಯಾಗಿ ಮಹದೇಶ ತಂಬಡಿ, ಕಾರ್ಯದರ್ಶಿಯಾಗಿ ಎಂ.ರಾಜು, ಸಂಘಟನಾ ಕಾರ್ಯದರ್ಶಿಯಾಗಿ ವಿನೋದ್ ಆರ್., ಕಾನೂನು ಸಲಹೆಗಾರರಾಗಿ ಸೋಮಣ್ಣ ಟಿ.ಎಸ್.,ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾದ ಕಳರಾಪುರ ನಾಗರಾಜು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದ ಸಂಘಟನೆ ಸಮುದಾಯದ ಮಕ್ಕಳ ಶಿಕ್ಷಣ ಆರೋಗ್ಯ ಮತ್ತು ಉದ್ಯೋಗ ಸೌಲಭ್ಯಗಳು ಸೇರಿದಂತೆ ರಾಜಕೀಯ ಅವಕಾಶಗಳನ್ನು ಪಡೆಯಲು ಸಂಘವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಜಿಲ್ಲಾದ್ಯಂತ ಪ್ರವಾಸ ಮಾಡಿ ಸಂಘಟನೆಯನ್ನು ಮಾಡಲಾಗುವುದು ಪ್ರಸಕ್ತ ಸಾಲಿನಲ್ಲಿ ೧೦ ಸಾವಿರ ಸದಸ್ಯರನ್ನು ನಮ್ಮ ಸಂಘಕ್ಕೆ ಸದಸ್ಯರನ್ನಾಗಿ ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ಈ ಕಾರಣಕ್ಕಾಗಿ ಮೈಸೂರಿನಲ್ಲಿ ಕಚೇರಿ ಮಾಡುವುದು, ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಇನ್ನಿತರ ಕಚೇರಿ ಸಂಬಂಧಿತ ಕೆಲಸಗಳನ್ನು ಮಾಡಲಾಗುವುದು, ಸಮುದಾಯದ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಸಂಘಟನೆ ಕಂಕಣಬದ್ಧವಾಗಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಕರ್ನಾಟಕ ರಾಜ್ಯ ಅಹಿಂದಾ ಒಕ್ಕೂಟದ ಅಧ್ಯಕ್ಷರಾದ ದ್ಯಾವಪ್ಪನಾಯಕ ಅವರನ್ನು ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಕರಳಾಪುರ ನಾಗರಾಜು ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ದ್ಯಾವಪ್ಪ ನಾಯಕ ಮಾತನಾಡಿ, ಉಪ್ಪಾರ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕರಳಾಪುರ ನಾಗರಾಜು ನೇತೃತ್ವದಲ್ಲಿ ನೂತನ ಸಂಘವನ್ನು ರಚಿಸಲಾಗಿರುವುದು ಸಂತೋಷದ ವಿಷಯವಾಗಿದ್ದು, ಈ ಸಂಘಟನೆಗೆ ಸರ್ವ ರೀತಿಯಲ್ಲೂ ತಾವು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿ ನೂತನ ಅಧ್ಯಕ್ಷರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ಸಂಘದ ನೂತನ ನಿರ್ದೇಶಕರಾದ ಎಂ.ಕೆ.ರಮೇಶ, ರಂಗಸ್ವಾಮಿ, ಶಿವಕುಮಾರ್ ಪಿ., ಚಂದ್ರಕುಮಾರ್, ಮಂಜುನಾಥ್, ಸಿ.ಸಿದ್ದಪ್ಪ, ಮಾದೇಶ, ಸಿದ್ದಶೆಟ್ಟಿ ಕೆ.,ರವಿಕುಮಾರ್ ಕೆ., ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular