ಮಂಗಳೂರು(ದಕ್ಷಿಣ ಕನ್ನಡ): ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವೂರು ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ನಡೆಯಿತು.
ಅಂದಾಜು ಸುಮಾರು 1 ಕೋಟಿ ವೆಚ್ಚದಲ್ಲಿ ಈ ಕಟ್ಟಡದ ಸಂಪೂರ್ಣ ರೂವಾರಿಗಳಾದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಅಮೀನ್ ನೇತೃತ್ವ ವಹಿಸಿದ್ದರು.
ಮಂಗಳೂರು ನಗರದ ಉತ್ತರ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿ ಮತ್ತು ಈ ಕಟ್ಟಡದ ಸಂಪೂರ್ಣ ರೂವಾರಿ ಕೇಶವ ಅಮೀನ್ (ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ) ಶಂಕುಸ್ಥಾಪನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಜೇಮ್ಸ್ ಕುಟಿನೋ (ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ಉತ್ತರ ವಲಯ), ಸುಮಂಗಲಾ ರಾವ್ (ಸ್ಥಳೀಯ ಕಾರ್ಪೋರೇಟರ್, ಮನಪಾ, ಮಂಗಳೂರು), ದೀಪಿಕಾ ಶೆಟ್ಟಿ ( ಸಿ. ಆರ್. ಪಿ. ಕಾವೂರು), ಚಂದ್ರಹಾಸ್ ( ಉಪಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ), ವಿಕೇಶ್ ಮತ್ತು ಲಾವಣ್ಯ ಶೆಟ್ಟಿ (ಹಳೆ ವಿದ್ಯಾರ್ಥಿ ಸಂಘ ಕಾರ್ಯದರ್ಶಿ), ಗುರುಪ್ರಸಾದ್ ( ವಕೀಲರು), ಗಂಗಾಧರ್ (ನಿವೃತ್ತ ಮುಖ್ಯ ಶಿಕ್ಷಕರು), ಚಂದ್ರಾವತಿ ( ನಿವೃತ್ತ ಮುಖ್ಯ ಶಿಕ್ಷಕಿ), ಸುರೇಂದ್ರನಾಥ ಶೆಟ್ಟಿ ( ನಿವೃತ್ತ ಮುಖ್ಯ ಶಿಕ್ಷಕ), ಭುಜಂಗ ಪೂಜಾರಿ (ನಿವೃತ್ತ ಮುಖ್ಯ ಶಿಕ್ಷಕ), ಲಕ್ಷ್ಮಣ ಛಲವಾದಿ (ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ), ನಿತೇಶ್ ಕಾವೂರು, ಅಜಿತ್, ಶಿತೇಶ್ ಕೊಂಡೆ ( ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು), ಹಸನಬ್ಬ ( ಸಮಾಜ ಸೇವಕರು), ಪೆಲ್ಸಿ ರೆಗೋ ( ಸಾಮಾಜಿಕ ಕಾರ್ಯಕರ್ತೆ ) ಅಶ್ವಿನಿ, ಗೋಕುಲ್ ದಾಸ್ ಪ್ರಭು, ಅರ್ಚನಾ, ಕೃಷ್ಣಪ್ಪ ಸಾಲ್ಯಾನ್, ಕುಸುಮಕರ್, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು SDMC ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.