Sunday, April 20, 2025
Google search engine

Homeರಾಜ್ಯಸುದ್ದಿಜಾಲಸರ್ಕಾರಿ ವಕೀಲರ ಹುದ್ದೆಗೆ ಕೆ.ಸಿ.ಹರೀಶ್ ನೇಮಕ

ಸರ್ಕಾರಿ ವಕೀಲರ ಹುದ್ದೆಗೆ ಕೆ.ಸಿ.ಹರೀಶ್ ನೇಮಕ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ತಾಲೂಕು ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಯುವ ವಕೀಲ ಡಿ.ಕೆ.ಕೊಪ್ಪಲು ಕೆ.ಸಿ.ಹರೀಶ್ ಅವರನ್ನು ನೇಮಿಸಲಾಗಿದೆ.

ಹಾಲಿ ಈ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆ.ವಿ.ಮಹೇಶ್ ಅವರ ಹುದ್ದೆ ಮುಕ್ತಾಯ ಗೊಂಡಿರುವ ಹಿನ್ನೆಲೆಯಲ್ಲಿ ಕೆ.ಸಿ.ಹರೀಶ್ ಅವರನ್ನು ಮುಂದಿನ ಒಂದು ವರ್ಷ ಇಲ್ಲವೇ ಮುಂದಿನ ಆದೇಶದ ವರಗೆ ನೇಮಿಸಲಾಗಿದೆ.

ಈ ಸಂಬಂಧ ರಾಜ್ಯಪಾಲರ ಅದೇಶಾನುಸಾರ ರಾಜ್ಯ ಸರ್ಕಾರದ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿನಾರಾಯಣ್ ಅವರು ಕೆ.ಸಿ.ಹರೀಶ್ ಅವರನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ.

RELATED ARTICLES
- Advertisment -
Google search engine

Most Popular