Saturday, April 19, 2025
Google search engine

Homeರಾಜ್ಯಕೆಂಪೇಗೌಡರ ಜಯಂತ್ಯೋತ್ಸವ: ರೈತರಿಗೆ ಭತ್ತದ ಬೀಜ ವಿತರಣೆ

ಕೆಂಪೇಗೌಡರ ಜಯಂತ್ಯೋತ್ಸವ: ರೈತರಿಗೆ ಭತ್ತದ ಬೀಜ ವಿತರಣೆ

ಮಂಡ್ಯ: ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ  ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವನ್ನು ಮಂಡ್ಯದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಮನ್ಮುಲ್ ಉಪಾಧ್ಯಕ್ಷ ರಘುನಂದನ್, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ರಾಶಿ ಪೂಜೆ ನರೆವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೆಂಪೇಗೌಡ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ರೈತರಿಗೆ ಭತ್ತದ ಬೀಜ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

ಮನ್ ಮಲ್ ಉಪಾಧ್ಯಕ್ಷ ರಘುನಂದನ್  ಮಾತನಾಡಿ, ಒಕ್ಕಲಿಗರ ಒಗ್ಗೂಡಿಸಿ ವಿನೂತನ ಕಾರ್ಯಕ್ರಮ ಮಾಡಿದ್ದಾರೆ. ಒಕ್ಕಲಿಗ ಸಮುದಾಯ ರಾಜ್ಯ ಕಟ್ಟಲು ಮುಂದಾಗಿದೆ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ಸಮುದಾಯ ಕುಂಠಿತವಾಗಿದೆ. ನಮ್ಮ ಸಮುದಾಯದ ಅಭಿವೃದ್ಧಿ ಪಥ ಸಾಗಲು ಒಗ್ಗಟ್ಟು ಅವಶ್ಯಕ. ಒಗ್ಗಟ್ಟು ಪ್ರದರ್ಶನ ಮಾಡುವ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗಿದೆ ಎಂದರು.

ನಮ್ಮ ಸಮುದಾಯ ಅಭಿವೃದ್ಧಿಯಾಗಬೇಕು. ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಉತ್ತಮ ಇಳುವರಿ ಬರುವಂತಹ ಭತ್ತದ ತಳಿತ ಬೀಜ ವಿತರಣೆ ಮಾಡಲಾಗುವುದು. IAS, IPS ಪರೀಕ್ಷೆಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡಲಾಗುವುದು ಎಂದರು.

ಮಂಡ್ಯ ಜಿಲ್ಲೆಯ ಜನರು ಒಗ್ಗಟ್ಟು ಆಗಬೇಕು. ನಮ್ಮ ಒಕ್ಕಲಿಗರ ಸಮುದಾಯ ಭವನ ಕಟ್ಟಲಾಗುವುದು. ನಾನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತೆ. ರೈತರ ಪರವಾಗಿ ನಾವು ಇರ್ತೇವೆ. ಮುಂದಿನ ದಿನಗಳಲ್ಲಿ ನಾವೇ ಖರೀದಿ ಮಾಡಿ ಬೇರೆ ಬೇರೆ ಕಡೆ ಹಂಚಿಕೆ ಮಾಡುವ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ RAPCMS ಅಧ್ಯಕ್ಷ ಶೇಖರ್, ಜೆಡಿಎಸ್ ಮುಖಂಡ ಸುರೇಶ್, ಹೆಚ್.ಸಿ.ಕಾಳೇಗೌಡ, ಸತ್ಯಮೂರ್ತಿ, ಶಿವಕುಮಾರ್, ಸೇರಿ ಹಲವರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular