ಮಂಗಳೂರು (ದಕ್ಷಿಣ ಕನ್ನಡ): ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ದರೋಡೆ ಮಾಡಿದ ಘಟನೆ ಮಂಗಳೂರು ನಗರದ ಹೊರವಲಯದ ಕೋಟೆಕಾರಿನ ಕೆ.ಸಿ ರೋಡಲ್ಲಿ ನಡೆದಿದೆ. ಹಾಡಹಗಲೇ ಐದು ಮಂದಿಯ ತಂಡವು ಬಂದೂಕು ತೋರಿಸಿ ಈ ಕೃತ್ಯ ಎಸಗಿದೆ.
ಕಾರಲ್ಲಿ ಬಂದ ಈ ತಂಡ ಚಿನ್ನ, ನಗದುಗಳೆಲ್ಲವನ್ನು ಕಳವು ಮಾಡಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ.
ವಿಷ್ಯ ತಿಳಿದು ಸ್ಥಳಕ್ಕೆ ಸ್ಪೀಕರ್, ಸ್ಥಳೀಯ ಶಾಸಕ ಯುಟಿ ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.