ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಳೆದ ೨೭ ವರ್ಷಗಳಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನವ ನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ೪೦೦ ಕೋಟಿ ವಹಿವಾಟು ನಡೆಸುತ್ತಿದ್ದು, ೩ ಕೋಟಿ ೧ಲಕ್ಷ ನಿವ್ವಳ ಲಾಭದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.
ಪಟ್ಟಣದ ಮಧುವನಹಳ್ಳಿ ರಸ್ತೆಯಲ್ಲಿರುವ ಆರ್.ಆರ್.ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸರ್ವ
ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು ಬ್ಯಾಂಕಿನಲ್ಲಿ ೪೬೦೦ ಮಂದಿ ಸದಸ್ಯರಿದ್ದು ೨೮೫ ಕೋಟಿ ಸಾಲ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ೪೨೫ ಕೋಟಿ ರೂ ವಹಿವಾಟು ನಡೆಸುವ ಗುರಿ ಹೊಂದಿದ್ದು ೪ ಕೋಟಿ ಲಾಭ ಗಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದಿರುವ ೪೬೦೦ ಮಂದಿ ಷೇರುದಾರ ಸದಸ್ಯರ ಪೈಕಿ ೧೩೦೦ ಮಂದಿ ಪೂರ್ಣ
ಪ್ರಮಾಣದ ಷೇರು ಹಣ ಪಾವತಿ ಮಾಡಿರುವುದರಿಲ್ಲ ಹಾಗಾಗಿ ಅವರುಗಳು ೫ ಸಾವಿರಕ್ಕಿಂತ ಹೆಚ್ಚು ಹಣ
ಪಾವತಿಸಿ ಪೂರ್ಣ ಪ್ರಮಾಣದ ಷೇರುದಾರರಾಗಬೇಕೆಂದು ಮನವಿ ಮಾಡಿದರು.
ಸರ್ವ ಸದಸ್ಯರ ಹಿತಕಾಯ್ದು ಬ್ಯಾಂಕಿನ ಏಳಿಗೆಗೆ ಕಂಕಣ ಬದ್ದರಾಗಿ ಕೆಲಸ ಮಾಡಲು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು ನಮಗೆ ಎಲ್ಲರೂ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕೆಂದು ಕೋರಿದ ಅಧ್ಯಕ್ಷರು ಸಣ್ಣ ವ್ಯಾಪಾರಸ್ಥರ ಸಾಲದಿಂದ ಆರಂಭಿಸಿ ಉದ್ಯಮಕ್ಕೂ ಬೃಹತ್ ಪ್ರಮಾಣದಲ್ಲಿ ಬ್ಯಾಂಕಿನ ವತಿಯಿಂದ ಸಾಲ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹಳೇ ಮೈಸೂರು ಭಾಗದ ಐದು ಜಿಲ್ಲೆಗಳ ಪೈಕಿ ನಮ್ಮ ಬ್ಯಾಂಕ್ ಪಾರದರ್ಶಕ ಆಡಳಿತ ನಡೆಸುತ್ತಿದ್ದು ಇದರ ಜತೆಗೆ ಪೋನ್ಪೇ, ಗೂಗಲ್ ಪೇ ಮತ್ತು ಎಟಿಎಂ ಸವಲತ್ತು ಕಲ್ಪಿಸಿದ್ದು ಇದರೊಂದಿಗೆ ಮೊಬೈಲ್ ಬ್ಯಾಂಕಿoಗ್ ಅನುಕೂಲ ಮಾಡಿರುವುದರಿಂದ ಸರ್ವರಿಗೂ ಅನುಕೂಲವಾಗುತ್ತಿದ್ದು ಮುಂದಿನ ದಿನಗಳಲ್ಲಿ ಷೇರು ಬಂಡವಾಳವನ್ನು ಹೆಚ್ಚು ಮಾಡಿ ಬ್ಯಾಂಕಿನ ವ್ಯಾಪ್ತಿಯ ಜನರಿಗೆ ಅತ್ತುö್ಯತ್ತಮ ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.
ಬ್ಯಾಂಕಿನ ಷೇರುದಾರ ಸದಸ್ಯರಾಗಿದ್ದು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪ್ರಸ್ತುತ ೧೦ ಸಾವಿರ
ಮರಣ ನಿಧಿ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಮಾಡಲು ಚಿಂತನೆ ನಡೆಸಲಾಗಿದೆ ಎಂದರಲ್ಲದೆ ಸದಸ್ಯರಿಗೆ ಶೇ.೧೦ ಡಿವಿಡೆಂಟ್ ನೀಡುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರೆಲ್ಲದೆ ಇದರೊಂದಿಗೆ ಉಡುಗೊರೆ ಕೂಪನ್ ವಿತರಣೆ ಮಾಡಲಾಗುತ್ತಿದೆ ಎಂದರು.
ಬ್ಯಾಂಕಿನಲ್ಲಿ ೪೧ ಕೋಟಿ ರೂ ಠೇವಣಿ ಹಣವಿದ್ದು ಅದನ್ನು ದ್ವಿಗುಣ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದ್ದು ಸಾರ್ವಜನಿಕರು ಹೆಚ್ಚಾಗಿ ನಮ್ಮ ಬ್ಯಾಂಕಿನಲ್ಲಿಯೇ ಠೇವಣಿ ಇಡಬೇಕೆಂದು ಕೋರಿದ
ಕೆ.ಎನ್.ಬಸಂತ್ ಷೇರು ಬಂಡವಾಳ ಪ್ರಸ್ತುತ ೧೨ ಕೋಟಿ ಇದ್ದು ಅದನ್ನು ೧೫ ಕೋಟಿಗೆ ಏರಿಸುವ ಗುರಿ
ಇಟ್ಟುಕೊಂಡಿದ್ದು ನಮಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಷೇರುದಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಬ್ಯಾಂಕಿನ ಷೇರುದಾರ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ತಂಬಾಕು ಮಂಡಳಿ ನಿವೃತ್ತ ಅಧೀಕ್ಷಕ ಕೆ.ಎನ್.ದಿನೇಶ್, ಬ್ಯಾಂಕಿನ ಉಪಾಧ್ಯಕ್ಷ
ಸರೋಜನಾರಾಯಣ್, ನಿರ್ದೇಶಕರಾದ ಕೇಶವ್, ವೈ.ಎಸ್.ಕುಮಾರ್, ಅಪ್ಸರ್ಬಾಬು, ಎಸ್.ಮಹದೇವಯ್ಯ,
ಎ.ಚಂದ್ರಶೇಖರ್, ಚಂದ್ರಕುಮಾರ್, ಕೆ.ರಮೇಶ್ರಾವ್, ಸುಬ್ಬನಾಯಕ, ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎನ್.ಎಸ್.ವಿಶ್ವನಾಥ್, ಹೆಚ್.ಟಿ.ಅನಂತರಾಮಯ್ಯ, ವಿ.ಶ್ರೀನಿವಾಸಮೂರ್ತಿ, ಕೆ.ಆರ್.ನಗರ ಶಾಖಾ ವ್ಯವಸ್ಥಾಪಕ ಎಂ.ಪಿ.ಸುಹಾಸ್, ಪಿರಿಯಾಪಟ್ಟಣ ಶಾಖಾ ವ್ಯವಸ್ಥಾಪಕ ಮಂಚನಾಯಕ, ಹುಣಸೂರು ಶಾಖಾ ವ್ಯವಸ್ಥಾಪಕ ಎ.ವಿ.ಮಂಜುನಾಥ್, ಹೂಟಗಳ್ಳಿ ಶಾಖಾ ವ್ಯವಸ್ಥಾಪಕ ಕೆ.ಎಸ್.ಪ್ರಮೋದ್, ಸಾಲ ವಸೂಲಿ ವಿಭಾಗದ ಹಿರಿಯ ವ್ಯವಸ್ಥಾಪಕ ವ್ಯವಸ್ಥಾಪಕ
ಹೆಚ್.ವಿ.ಚನ್ನಕೇಶವ , ಸಿಬ್ಬಂದಿ ಹಿತೇಶ್ ಇದ್ದರು.