Friday, April 11, 2025
Google search engine

Homeರಾಜಕೀಯಕೆ.ಆರ್.ನಗರ: ನೂತನ ಅಧ್ಯಕ್ಷರುಗಳ ನೇಮಕ

ಕೆ.ಆರ್.ನಗರ: ನೂತನ ಅಧ್ಯಕ್ಷರುಗಳ ನೇಮಕ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಮಂಡಲದ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರಾಗಿ ಸಾ.ರಾ.ತಿಲಕ್ ಮತ್ತು ಕೆ.ಆರ್.ನಗರ ಮಂಡಲದ ಅಧ್ಯಕ್ಷರಾಗಿ ಹೊಸೂರು ಧರ್ಮ ಅವರನ್ನು ನೇಮಿಸಲಾಗಿದೆ.

ಹಲವಾರು ವರ್ಷಗಳಿಂದ ಯುವಕರಾಗಿದ್ದು ಕೊಂಡು ಕೆ.ಆರ್.ನಗರ ಕ್ಷೇತ್ರದ ಬಿಜೆಪಿ ಪಕ್ಷದ ಸಂಘಟನೆಗೆ ದುಡಿದಿರುವ ಇವರುಗಳ ಸೇವೆಯನ್ನು ಮನಗೊಂಡು ಇವರನ್ನು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಈ ಆದೇಶ ಹೊರಡಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿದ ಸಾ.ರಾ.ತಿಲಕ್ ಮತ್ತು ಹೊಸೂರು ಧರ್ಮ ಮಾತನಾಡಿ ನಮ್ಮ ನಾಯಕರಾದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರು ತಮಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಕ್ಷೇತ್ರದಲ್ಲಿ ಬಿ.ಜೆ.ಪಿ‌.ಪಕ್ಷದ ಸಂಘಟನೆಗೆ ದುಡಿಯುವುದಾಗಿ ತಿಳಿಸಿದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆ ಮಾಡುವುದರ ಜೊತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತು ವಿವಿದ ಹೋರಾಟಗಳನ್ನು ನಮ್ಮ ಪಕ್ಷದ ಕಾರ್ಯಕರ್ತರ ಜೊತೆಗೂಡಿ ಹೋರಾಟ ಮಾಡುವುದಾಗಿ ಹೇಳಿದರು.

RELATED ARTICLES
- Advertisment -
Google search engine

Most Popular