Friday, April 11, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ದೇವರ ಗುಡ್ಡ, ಹೆಗ್ಗಡಿ ಮತ್ತು ಕೋಲಕಾರ ಬಸವನ ಮೂಲಕ ಆಯ್ಕೆ

ಕೆ.ಆರ್.ನಗರ: ದೇವರ ಗುಡ್ಡ, ಹೆಗ್ಗಡಿ ಮತ್ತು ಕೋಲಕಾರ ಬಸವನ ಮೂಲಕ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಆಧುನಿಕ ಭರಾಟೆಯ ನಡುವೆ ಧಾರ್ಮಿಕ ಆಚರಣೆಗಳು ದಿನದಿಂದ ದಿನಕ್ಕೆ ಮರೆಯಾಗುತ್ತಿರುವ ನಡುವೆ ನೂತನವಾಗಿ ನಿರ್ಮಾಣಗೊಂಡ ದೇವಾಲಯಕ್ಕೆ ದೇವರ ಗುಡ್ಡನನ್ನು ಬಸವನ ಮೂಲಕ ಆಯ್ಕೆ ಮಾಡಿಸುವ ಮೂಲಕ ಬಸವ ಧಾರ್ಮಿಕ ಪವಾಡಕ್ಕೆ ಸಾಕ್ಷಿಯಾಯಿತು.

ಮಳವಳ್ಳಿ ತಾಲೂಕಿನ‌ ಹೊನ್ನನಾಯಕನ ಹಳ್ಳಿಯ ಸಿದ್ದಪ್ಪಾಜಿ ದೇವಾಲಯದ ಬಸವ ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಅಧಿಶಕ್ತಿ ಕಂಬಮ್ಮ ದೇವಾಯಲಕ್ಕೆ ನೂತನ‌ ದೇವರ ಗುಡ್ಡನನ್ನು ಗ್ರಾಮಕ್ಕೆ ಬಂದ ಎರಡು ಗಂಟೆಯ ಅವಧಿಯಲ್ಲಿ ಆಯ್ಕೆ ಮಾಡುವಲ್ಲಿ ಯಶಸ್ವಿ ಆಯಿತು.

ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದ ಶ್ರೀ ಆದಿಶಕ್ತಿ ಕಂಬಮ್ಮ ದೇವರ ಗುಡ್ಡ – ಹೆಗ್ಗಡಿ- ಕೋಲಕಾರನ್ನು ಮಳವಳ್ಳಿಯ ಹೊನ್ನನಾಯಕನ ಹಳ್ಳಿಯ ಸಿದ್ದಪ್ಪಾಜಿ ದೇವಾಲಯದ ಪವಾಡ ಬಸವ ಆಯ್ಕೆ ಮಾಡಿತು.

ಕಳೆದ ಆ.9ರ ಶುಕ್ರವಾರ ಈ ದೇವಾಲಯದ ಉದ್ಘಾಟನೆಯ ಬಳಿಕ ಈ ದೇವಾಲಯದಲ್ಲಿ ಪೂಜೆ ಪುರಸ್ಕಾರ ದಾರ್ಮಿಕ ಆಚರಣೆ ಮಾಡಲು ದೇವರ ಗುಡ್ಡ( ಅರ್ಚಕ) ಮತ್ತು ಹೆಗ್ಗಡಿ ಹಾಗು ಕೋಲಕಾರನನ್ನು ಆಯ್ಕೆ ಮಾಡಲು ಆ.12 ಸೋಮವಾರ ಈ ದೇವಾಲಯವನ್ನು ನಿರ್ಮಿಸಿದ ಬೆಣ್ಣೆ ಸಿದ್ದೇಗೌಡರ ವಂಶಸ್ಥದ ಕುಟುಂಬಸ್ಥರು ಹೊನ್ನನಾಯನಕ ಹಳ್ಳಿಗೆ ತೆರಳಿ ಬಸವನನ್ನು ಆಹ್ವಾನಿಸಿದ್ದರು.

ಮಂಗಳವಾರ ಬೆಳಿಗ್ಗೆ 10.45ಕ್ಕೆ ಗ್ರಾಮಕ್ಕೆ ಅಗಮಿಸಿದ ಬಸವನನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಶ್ರೀ ಆದಿಶಕ್ತಿ ಕಂಬಮ್ಮ‌ ದೇವಾಲಯಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಹೊರ ಆವರಣದಲ್ಲಿ ಆಯೋಜಿಸಲಾಗಿದ್ದ ದೇವರ ಗುಡ್ಡನನ್ನು‌ ಆಯ್ಕೆಗಾಗಿ ಜಯಕಾರ ಚಪ್ಪಾಳೆಯೊಂದಿಗೆ ಬಸವನನ್ನು ಕರೆತರಲಾಯಿತು.

ಮೊದಲಿಗೆ ಬೆಣ್ಣೆ ಸಿದ್ದೇಗೌಡರ ಕುಟುಂಬದ ಸುಮಾರು 19 ಯುವಕರನ್ನ ಕೂರಿಸಿ ಬಸವ ಇದರಲ್ಲಿ ಮೂರು ನಾಲ್ಕು ಮಂದಿ ಬಳಿ ಸಾಕಷ್ಟು ಬಾರಿ ಹೋಗಿ ಅವರನ್ನ ಗುದ್ದಿ ಮತ್ತೆ ದೇವಸ್ಥಾನಕ್ಕೆ ಹೋಗಿ ಬಂದ ಬಸವ ಕೊನೆಗೆ ಸಿ.ಎಂ.ಚಿರಂತ್ ಎಂಬುವರನ್ನು ಗುದ್ದುವ ಮೂಲಕ ಅಲ್ಲಿಂದ ದೇವಾಲಯದ ವರಿಗೆ ತಳ್ಳಿಕೊಂಡು ಬಂದ ಬಸವ ದೇವರ ಗುಡ್ಡಪ್ಪನ್ನಾಗಿ ಆಯ್ಕೆಮಾಡಿದಾಗ ನೇರದಿದ್ದ ಸಾವಿರಾರು ಮಂದಿ ಬಸವನಿಗೆ ಚಪ್ಪಾಳೆ ತಟ್ಟಿ ಜಯಕಾರ ಹಾಕಿ ಸಂಭ್ರಮಿಸಿದರು.

ನಂತರ ನೂತನ‌ ದೇವರ ಗುಡ್ಡನಿಗೆ ಎರಡು ಬಿಂದಿಗೆ ನೀರು ಹಾಕಿ‌ ಕೆಂಪು ಕಾವಿಯನ್ನು ತೊಡಿಸಿ ಹೂವಿನ ಹಾಕಿ ಪೂಜೆ ಮತ್ತು ಮಹಾ ಮಂಗಳಾ ಆರತಿಯನ್ನು‌ ದೇವರ ಗುಡ್ಡನ ತಂದೆ- ಸಣ್ಣಮಹದೇವ ತಾಯಿ- ರಾಜೇಶ್ವರಿ ಮತ್ತು ಅವರು ಕುಟುಂಬಸ್ಥರು ನೇರವೇರಿಸಿದರು.

ಬಳಿಕ ವಾದ್ಯಗೋಷ್ಠಿಯ ನಾದ ಮತ್ತು ಚಪ್ಪಾಳೆ ಜಯಕಾರ ಹಾಕಿ ದೇವರ ಗುಡ್ಡನ ಮೂಲಕ ಕಂಬಮ್ಮ ತಾಯಿಯನ್ನು ಬರ ಮಾಡಿಕೊಂಡು ಕಳಹೊತ್ತ ದೇವರ ಗುಡ್ಡ ದೇವಾಲಯದ ಹೊರ ಸುತ್ತಾ ಸುತ್ತಿ ಬಂದು ದೇವಾಲಯಕ್ಕೆ ಬಸವನೊಂದಿಗೆ ಪ್ರವೇಶ ಮಾಡಿದಾಗ ಇಲ್ಲಿ ಹಾಜರಿದ್ದ ಸಾವಿರಾರು ಮಂದಿ ಧಾರ್ಮಿಕತೆಯನ್ನು ಸಾಕ್ಷಿಕರಿಸಿದರು.

ನಂತರ ಈ ವಂಶದ ಮತ್ತು ದೇವಾಲಯದ ಉಸ್ತುವಾರಿ ಹಾಗೂ ಇಲ್ಲಿನ ಕಾರ್ಯಕ್ರಮವನ್ನು ನೋಡಿಕೊಳ್ಳುವ ಇವುಗಳನ್ನು ವಂಶಸ್ಥರಿಗಾಗಿ ತಿಳಿಸುವ ಹೆಗ್ಗಡಿ ಮತ್ತ್ತು ಕೋಲಕಾರನ್ನು ಆಯ್ಕೆ ಮಾಡಲು ಬಸವನ್ನು‌ ಕೋರಿದಾಗ ಇದರ ಆಯ್ಕೆಗಾಗಿ ದೇವಾಲಯ ಮುಂದೆ ಕುಳಿತಿದ್ದ ಈ ವಂಶದದ ಕುಟುಂಬದಲ್ಲಿ ಒಬ್ಬರಾದ ಸಿ.ಪಿ.ಗಿರೀಶ್ ಅವರನ್ನು ಹೆಗ್ಗಡಿಯಾಗಿ ಮತ್ತು ಸಿ.ಸಿ.ಗಲ್ಲಿಮಹದೇವ್ ಅವರನ್ನು ಕೋಲಕಾರನನ್ನಾಗಿ ದೇವಾಲಯಕ್ಕೆ ತಳ್ಳುವ ಮೂಲಕ ಆಯ್ಕೆ ಮಾಡಿ ಕೊಟ್ಟಿತು.

ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದ ಶ್ರೀ ಆದಿಶಕ್ತಿ ಕಂಬಮ್ಮ ದೇವಾಲಯದ ಹೆಗ್ಗಡಿಯಾಗಿ ಸಿ.ಪಿ.ಗಿರೀಶ್, ಗುಡ್ಡನಾಗಿ ಸಿ.ಎಂ. ಚಿರಂತ್ – ಕೋಲಕಾರನಾಗಿ ಸಿ.ಸಿ.ಗಲ್ಲಿ ಮಹದೇವ್ ಆಯ್ಕೆಯಾದರು.

ಆನಂತರ ನೂತನ ದೇವರ ಗುಡ್ಡ, ಹೆಗ್ಗಡಿ ಮತ್ತು ಕೋಲಕಾರನಿಗೆ ಕೇಶ ಮುಂಡನಾ ಮಾಡಿಸಿ ಧಾರ್ಮಿಕ ಪೂಜಾ ವಿಧಿ- ವಿಧಾನವನ್ನು ನೇರವೇರಿಸಿ ಗುರು ಬೋದನೆಯನ್ನು ಅಡಗನಹಳ್ಳಿಯ ಗುರುಗಳಾದ ಚಂದ್ರಪಾಲ್ ಅವರು ನಡೆಸಿ ಕೊಟ್ಟರು ಈ ಮೂಲಕ 12 ದಿವಸಗಳಿಂದ ನಡೆದ ಇಲ್ಲಿನ ಧಾರ್ಮಿಕ ಪೂಜಾ ಕಾರ್ಯಕ್ರಮ ಮುಕ್ತಾಯ ಗೊಂಡಿತು.

” ಕೆ.ಆರ್.ನಗರ ಕ್ಷೇತ್ರದಲ್ಲಿ ಗಮನ ಸೆಳೆದಿದ್ದ ದೇವಸ್ಥಾನ”

ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಚಿಕ್ಕಕೊಪ್ಪಲು ಗ್ರಾಮದ ಬೆಣ್ಣೆ ಸಿದ್ದೇಗೌಡರ ವಂಶಸ್ಥರು ಸರ್ಕಾರ ಮತ್ತು ಜನಪ್ರತಿನಿಧಿಗಳ ಅನುಧಾನ ಮತ್ತು ಅವರ ವೈಯುಕ್ತಿಕ ನೆರವು ಇಲ್ಲದೇ ಈ ವಂಶದ ಕುಟುಂಬದಸ್ಥರೆಲ್ಲಾ ಸೇರಿ ತಾವೇ ಇಷ್ಟು ದೊಡ್ಡ ಮೊತ್ತದ ಹಣಹಾಕಿ ನಿರ್ಮಿಸಿರುವ ಶ್ರೀ ಆದಿಶಕ್ತಿ ಕಂಬಮ್ಮ ದೇವಾಲಯ ಉದ್ಘಾಟನೆಗೂ ಯಾವ ಒಬ್ಬ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಸಾವಿರಾರು ಮಂದಿ ಸೇರಿ ಧಾರ್ಮಿಕ ಪೂಜಾ ವಿಧಾನವನ್ನು ನಡೆಸಿ ಉದ್ಘಾಟಿಸಿದ್ದು ಕೆ.ಆರ್.ನಗರ ವಿಧಾನ ಸಭಾಕ್ಷೇತ್ರದಲ್ಲಿ ಗಮನ ಸೆಳೆದಿತ್ತು.

“ಹೆಚ್ಚಿಸಿದ ಎದೆ ಬಡಿತ :

ಮಳವಳ್ಳಿ ತಾಲೂಕಿನ‌ ಹೊನ್ನನಾಯಕನ ಹಳ್ಳಿಯ ಸಿದ್ದಪ್ಪಾಜಿ ದೇವಾಲಯದ ಬಸವ ಆದಿಶಕ್ತಿ ಕಂಬಮ್ಮ ದೇವಾಯಲಕ್ಕೆ ನೂತನ ದೇವರ ಗುಡ್ಡಪ್ಪ ಮತ್ತು ಹೆಗ್ಗಡಿ ಹಾಗು ಕೋಲಕಾರ ನನ್ನು ಆಯ್ಕೆ ಮಾಡಲು ಹೊರಟ ವೇಳೆ ಪ್ರತಿಯೊಬ್ಬರಲ್ಲು ಯಾರು ದೇವರ ಗುಡ್ಡಪ್ಪ ಮತ್ತು ಹೆಗ್ಗಡಿ ಹಾಗು ಕೋಲಕಾರ ಯಾರು ಆಗಲಿದ್ದಾರೆ ಎಂಬ ಕೂತುಹಲ ಕ್ಷಣ-ಕ್ಷಣಕ್ಕು ಎದೆ ಬಡಿತ ಹೆಚ್ವಿಸುವಂತೆ ಮಾಡಿತ್ತು.


RELATED ARTICLES
- Advertisment -
Google search engine

Most Popular