ಅಧ್ಯಕ್ಷರಾಗಿ ಜಿ.ಎಲ್.ಧರ್ಮ, ಉಪಾಧ್ಯಕ್ಷರಾಗಿ ಹೊಸೂರು.ಎಸ್. ಚೇತನ್ಕುಮಾರ್ ಆಯ್ಕೆ
ಕೆ.ಆರ್.ನಗರ: ವಕೀಲರ ಸಂಘಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಿ.ಎಲ್.ಧರ್ಮ, ಉಪಾಧ್ಯಕ್ಷ ಹೊಸೂರು.ಎಸ್. ಚೇತನ್ಕುಮಾರ್, ಕಾರ್ಯದರ್ಶಿಯಾಗಿ ಪರಮೇಶ್ವರಪ್ಪ, ಜಂಟಿಕಾರ್ಯದರ್ಶಿಯಾಗಿ ರವಿಕುಮಾರ್, ಖಜಾಂಚಿಯಾಗಿ ಕೆ.ಎಂ.ಕಾರ್ತಿಕ್ ಮತ್ತು ಗೌರವಾಧ್ಯಕ್ಷರಾಗಿ ಎ.ಜಿ.ಗಾಯತ್ರಿರವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿದ್ದ ಕೆ.ಎಸ್.ದಿಲೀಪ್ರವರ ಆಡಳಿತ ಮಂಡಳಿ ಆಗಸ್ಟ್ ೨೩ಕ್ಕೆ ಕೊನೆಗೊಂಡಿದ್ದರಿಂದ ತಾತ್ಕಾಲಿಕ ಸಮಿತಿ ಸದಸ್ಯರನ್ನಾಗಿ ಹಿರಿಯ ವಕೀಲರಾದ ಜಿ.ಆರ್.ರಾಮೇಗೌಡ, ದಯಾನಂದ್, ರುದ್ರಮೂರ್ತಿ, ಕೆ.ಪಿ.ರಮೇಶ್ರವರನ್ನು ನೇಮಕ ಮಾಡಿಕೊಳ್ಳಲಾಗಿತ್ತು.
ಗುರುವಾರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಯಿತು. ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ವಕೀಲರಾದ ಕೆ.ಎಸ್.ದಿಲೀಪ್, ಮಹದೇವಸ್ವಾಮಿ, ಶಿವರಾಜು, ಎ.ತಿಮ್ಮಪ್ಪ, ಶಿವಶಂಕರ್, ಪದ್ಮಶ್ರೀ, ರಾಧಿಕಾ, ನೇತ್ರಾವತಿ, ಜಗದೀಶ್ವರಿ, ವೇದಾವತಿ, ಪುಷ್ಪಲತಾ, ಧನಲಕ್ಷಿö್ಮ, ಕೆಂಪನಕೊಪ್ಪಲುದಿನೇಶ್, ಕೆ.ಸಿ.ಮಂಜುನಾಥ್, ಜಿ.ಕೆ.ಶಿವರಾಜು, ಬಿಪಿನ್, ಸಿ.ಎಲ್.ಚೇತನ್, ಮಹೇಶ್, ರಂಚಿತಾ, ಪೂರ್ಣಿಮ, ಕುಮಾರಿ ಮುಂತಾದವರು ಹಾಜರಿದ್ದು ನೂತನ ಆಡಳಿತ ಮಂಡಳಿ ಸದಸ್ಯರನ್ನು ಅಭಿನಂದಿಸಿದರು.
ಆನಂತರ ಅಧ್ಯಕ್ಷ ಜಿ.ಎಲ್.ಧರ್ಮ ಸೇರಿದಂತೆ ಪದಾಧಿಕಾರಿಗಳು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡರವರನ್ನು ಭೇಟಿ ಮಾಡಿ ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮುಖಂಡರಾದ ಜಿ.ಎಲ್.ಭರತ್, ಮಿರ್ಲೆಪ್ರಭಾಕರ್, ಆನಂದ್ ಸೇರಿದಂತೆ ಇನ್ನಿತರರು ಹಾಜರಿದ್ದರು.