- ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಎರಡು ಕಣ್ಣು ಕಾಣದೇ ಬಸ್ ನಿಲ್ದಾಣದಲ್ಲಿ ಕಾಲದೂಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮದ ಯುವಕರೇ ವಂತಿಗೆ ಹಣ ಸಂಗ್ರಹಿಸಿ ನಿರಾಶ್ರಿತರ ಆಶ್ರಮಕ್ಕೆ ಸೇರಿಸಿ ಹೃದಯವಂತಿಗೆ ಮೆರೆದಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಪರೋಟ ರಾಜಣ್ಣ ಎಂಬುವರಿಗೆ ಎರಡು ಕಣ್ಣು ಕಾಣದೇ ಗ್ರಾಮದ ಬಸ್ ನಿಲ್ದಾಣದಲ್ಲಿ ಗ್ರಾಮಸ್ಥರು ಉದಾರತೆಯಿಂದ ನೀಡುವ ಆಹಾರ ಸೇವಿಸಿ ಕೊಂಡು ಬದುಕು ದೂಡತ್ತಿದ್ದರು.
ಮೂಲತ ಹಾಸನ ಜಿಲ್ಲೆಯ ಹಾಸನ ತಾಲೂಕಿನ ವ್ಯಾಪ್ತಿಗೆ ಬರುವ ವರ್ತಿಕೆರೆ ಗ್ರಾಮದವರು ಎನ್ನಲಾದ ರಾಜಣ್ಣ ಅವರು ಉದ್ಯೋಗ ಅರೆಸಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮಕ್ಕೆ ಬಂದು ಇಲ್ಲಿನ ಕೆಲವು ಹೊಟೇಲ್ ಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು.
ನಂತರ ಚಿಕ್ಕಕೊಪ್ಪಲು ಗ್ರಾಮದ ಯುವತಿಯನ್ನು ಮದುವೆ ಅದ ರಾಜಣ್ಣ ಅವರು ನಂತರ ಹೊಟೇಲ್ ಕೆಲಸ ಬಿಟ್ಟು ಚಿಕ್ಕಕೊಪ್ಪಲು ದೊಡ್ಡಕೊಪ್ಪಲು ಗ್ರಾಮದಲ್ಲಿ ಕೂಲಿ-ನಾಲಿ ಮಾಡಿಕೊಂಡಿದ್ದ ಇವರಿಗೆ ಪತ್ನಿ ಅವರು ಹಲವಾರು ವರ್ಷದಿಂದ ಗ್ರಾಮದಿಂದ ಕಾಣಿಯಾಗಿ ಹೋದವರು ಮತ್ತೆ ಗ್ರಾಮಕ್ಕೆ ಬಾರದ ಹಿನ್ನಲೆಯಲ್ಲಿ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದರು.
ಕೆಲ ತಿಂಗಳ ಹಿಂದೆ ಮಧುಮೇಹ ದಿಂದ ಒಂದು ಕಣ್ಣು ಕಳೆದ ಕೊಂಡಿದ್ದ ರಾಜಣ್ಣ ಅವರು 15 ದಿವಸಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದಾಗ ಕಡ್ಡಿ ಕಣ್ಣಿಗೆ ತಾಕಿ ಇರೋ ಇನ್ನೊಂದು ಕಣ್ಣು ಕಳೆದು ಕೊಂಡು ಗ್ರಾಮದ ಬಸ್ ನಿಲ್ದಾಣದಲ್ಲಿ ಬದುಕು ಸಾಗಿಸುತ್ತಿದ್ದರು ಇದರಿಂದ ನಿತ್ಯ ಕಾರ್ಯಕ್ರಮಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಇದನ್ನು ಕಂಡ ಗ್ರಾಮದ ಯುವಕ ಮಂಜುನಾಥ್ ಪ್ರಸಾದ್ ಅವರು ಕೆ.ಆರ್.ನಗರ ಮತ್ತು ಮೈಸೂರು ಹಾಗು ಬೆಂಗಳೂರಿನ ವಿವಿಧ ಆಶ್ರಮಗಳನ್ನ ಪತ್ರಕರ್ತ ವಿನಯ್ ದೊಡ್ಡಕೊಪ್ಪಲು ಅವರ ಸಹಕಾರದೊಂದಿಗೆ ಸಂಪರ್ಕಸಿ ಇವರ ಇರೋ ವ್ಯಾಸ್ಥವನ್ನು ಆಶ್ರಮಗಳ ಮುಖ್ಯಸ್ಥರಿಗೆ ತಿಳಿಸಿದ್ದರು.
ಕೆಲವರು ಮಾಹಿತಿ ತಿಳಿದರು ಕೂಡ ಸೂಕ್ತ ಸ್ಪಂದನೆ ಕೊಡದೆ ಹೋದ ಸಂದರ್ಭದಲ್ಲಿ ಬೆಂಗಳೂರಿನ ದಾಸನಪುರ ಹೋಬಳಿಯ ಸೊಂಡೆಕೊಪ್ಪದ ಜನಸ್ನೇಹಿ ನಿರಾಶ್ರಿತರ ಆಶ್ರಮದ ಮುಖ್ಯಸ್ಥರಾದ ಯೋಗಿಶ್ ಅವರು ಇವರಿಗೆ ಉಚಿತವಾಗಿ ಆಶ್ರಯ ಕೊಡುವುದಾಗಿ ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಲು ವಾಹನ ಮತ್ತು ಔಷದ ಉಪಚಾರದ ಅನುಕೂಲಕ್ಕಾಗಿ ಹಣದ ಅವಶ್ಯಕತೆ ಇದ್ದುದನ್ನು ಕಂಡು ಈ ಎರಡು ಗ್ರಾಮದ ಯುವಕರು ಬುಧವಾರ ಬೆಳಿಗ್ಗೆ ದೊಡ್ಡಕೊಪ್ಪಲು ಡೈರಿ ರಘು ಅವರ ಅಂಗಡಿ ಬಳಿ ಸಭೆ ಎರಡು ಗ್ರಾಮದವರಿಂದ ಸುಮಾರು 10 ಸಾವಿರದಷ್ಟು ವಂತಿಗೆ ಸಂಗ್ರಹಿಸಿ ವಾಹನದ ವ್ಯವಸ್ಥೆ ಮಾಡಿ ರಾಜು ಅವರನ್ನು ಕಳಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜು ಅವರು ಕಣ್ಣು ಕಾಣದ ಸಂದರ್ಭದಲ್ಲಿ ಅನ್ನ ನೀರು ಕೊಟ್ಟು ಉದಾರತೆ ತೋರಿ ಬದುಕಿಗೆ ಆಶ್ರಮ ಸೇರಿಸಲು ಸಹಕಾರ ಕೊಟ್ಟ ಚಿಕ್ಕಕೊಪ್ಪಲು-ದೊಡ್ಡಕೊಪ್ಪಲು ಅವಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕಣ್ಣಿರು ಇಡುತ್ತಾ ಬೆಂಗಳೂರಿನತ್ತ ಹೊರಟರು.
ಈ ಒಂದು ಕಾರ್ಯಕ್ಕೆ ಚಿಕ್ಕಕೊಪ್ಪಲು- ದೊಡ್ಡಕೊಪ್ಪಲು ಗ್ರಾಮದ ಯುವಕರಾದ ಡಿ.ಪುನಿತ್, ಅರುಣ್ ಕಲ್ಲಹಟ್ಟಿ, ಸಿ.ಬಿ.ಸಂತೋಷ್, ಸಿ.ಎಸ್.ಗಿರೀಶ್, ಸಿ.ಎಚ್.ನವೀನ್, ಕೋಳಿಮನು, ಅಭಿ,ಮೋಹನ, ದರ್ಶನ್, ಅಶೋಕ್,ಡೈರಿರಘು,ಪುಟ್ಟರಾಜು,ಲೋಕಣ್ಣ,ಸುನೀಲ್, ಕೋಳಿ ಮಂಜ, ಚಂದ್ರಣ್ಣ, ಭರತ್, ಮಾವತ್ತೂರು
ಉದಯ್,ಸ್ವಾಮಿ,ವೆಂಕಟೇಶ್, ಅರುಣ,ಅಮಿತ್ ಗಾಂಧಿ, ಡೈರಿ ಉಮೇಶ್, ಜೆಸಿಬಿ ದೀಪು,ಚರಣ್ ,ದೀಲೀಪ್, ಸಿ.ಬಿ.ಆಶೋಕ್, ಕೃಷ್ಣನಾಯಕ,ಕಾಡುವಿಜಿ,ಚಿರಂತ್, ಕಾರ್ತಿಕ್,ಏಳನೀರುರಾಜು, ಸತೀಶ್,ಲಕ್ಷಣ್,ಶೇಖರ್, ಹೋಟೆಲ್ ರಘು ಸೇರದಂತೆ ಮತ್ತಿತರರು ಸಾಥ್ ನೀಡಿದರು
ಪರೋಟ ರಾಜಣ್ಣ ಅವರ ಪತ್ನಿ ಗ್ರಾಮದಿಂದ ಹೋಗಿ ಹಲವಾರು ವರ್ಷಗಳಾಗಿವೆ ಇವರ ಹಾಸನದ ಕುಟುಂಬದವರು ಹುಡುಕಿದರು ಮಾಹಿತಿ ಇಲ್ಲ ಪತ್ನಿ ಮನೆಯವರು ತುಂಬಾ ಬಡವರಾಗಿರುವುದರಿಂದ ಕಣ್ಣು ಕಾಣದ ರಾಜಣ್ಣ ಚಿಕ್ಕಕೊಪ್ಪಲು ಬಸ್ ನಿಲ್ದಾಣದಲ್ಲಿ ಬದುಕು ಸಾಗಿಸುತ್ತಿದ್ದನ್ನು ಕಂಡು ಇವರನ್ನ ಎರಡು ಗ್ರಾಮಸ್ಥರೊಂದಿಗೆ ಚರ್ಚಿಸಿ ಇವರನ್ನು ನಿರಾಶ್ರಿತರ ಆಶ್ರಮಕ್ಕೆ ಸೇರಿಸಲು ತೀರ್ಮಾನಿಸಲಾಯಿತು
- ಮಂಜುನಾಥ್ ಪ್ರಸಾದ್,ಚಿಕ್ಕಕೊಪ್ಪಲು ಗ್ರಾಮದ ಯುವಕ