ನಂಜನಗೂಡು: ಶಂಕರಮಠದಲ್ಲಿ ವಿಶ್ವ ಹಿಂದೂ ಪರಿಷತ್ ನ 61 ನೇ ವರ್ಷದ ಸ್ಥಾಪನ ದಿನಾಚರಣೆ ಅಂಗವಾಗಿ ರಾಧಾ – ಕೃಷ್ಣ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಇಮ್ಮಡಿ ಮುರುಗಿ ಶ್ರೀಗಳು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಹೆಚ್ ರಾಮದಾಸ್ ಅವರು ವಹಿಸಿದರು, ಮುಖ್ಯ ಅತಿಥಿಯಾಗಿ ಸುರೇಶ್ ರವರು ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಜಿಲ್ಲಾಧ್ಯಕ್ಷ ಪುನೀತ್ ಜಿ ರವರು ದಿಕ್ಸೂಚಿ ಭಾಷಣ ಮಾಡಿದರು.
ಮಕ್ಕಳು ಪ್ರತಿದಿನ ಒಂದು ಭಗವದ್ಗೀತೆ ಶ್ಲೋಕವನ್ನು ಕಲಿಯಬೇಕೆಂದು ಪುನೀತ್ ಜಿ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಮೋಹನ್ ಕುಮಾರ್ ಕಾರ್ಯದರ್ಶಿ ಪಣೀಶ್, ಸಹ ಕಾರ್ಯದರ್ಶಿ ಸಂಪತ್ ಕುಮಾರ್, ಉಪಾಧ್ಯಕ್ಷರಾದ ನಟರಾಜ್, ಮಾತೃಶಕ್ತಿಯ ಶ್ರೀಮತಿ ಸುಮಾ ಮತ್ತು ಶ್ರೀಮತಿ ಗಾಯಿತ್ರಿ ಸಂಚಲಕರಾದ ಶ್ರೀಧರ್ ಮತ್ತು ಮಂಡಳಿಯ ಸದಸ್ಯರಾದ ಸಿದ್ದರಾಜು, ನಾರಾಯಣ ಚಾರಿ, ನಂದೀಶ್, ಕೆ ಶ್ರೀಧರ್, ಶ್ರೀ ರಾಮ್ ಮೋಹನ್, ಶ್ರೀಮತಿ ಸವಿತಾ ನಾಗೇಂದ್ರ ಭಾಗವಹಿಸಿದ್ದರು.
ಡಾ ಶ್ರೀಕಾಂತ್ ರವರು, ಪಿ ಪ್ರಸಾದ್ ರವರು ಮತ್ತು ಸಂಘವಿ ಜೆವೆಲ್ಲೆರ್ಸ್ ಮಾಲೀಕರು ಮತ್ತು ಇಲಿಯಾಸ್ ಅಹಮದ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿದರು.