ಮೈಸೂರು: ಮೈಸೂರಿನ ಬಂಬೂ ಬಜಾರ್ ಬಳಿ ಇರುವ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಗಿಡಕ್ಕೆ ನೀರೆರೆಯುವ ಮೂಲಕ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ಎಸ್ ಶಿವರಾಂ ರವರು ಅರ್ಥಪೂರ್ಣವಾಗಿ ಹಾಗೂ ಸರಳವಾಗಿ ಆಚರಿಸಿಕೊಂಡರು.

ಹಲವಾರು ವರ್ಷಗಳಿಂದಲೂ ಕೂಡ ತಮ್ಮ ಹುಟ್ಟು ಹಬ್ಬದಂದು ಇದೇ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಮಾದರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆ ಎಸ್ ಶಿವರಾಂ ರವರ ಹಿತೈಷಿಗಳು, ಸ್ನೇಹಿತರು ಎಲ್ಲರೂ ಕೂಡ ಹುಟ್ಟು ಹಬ್ಬದ ಶುಭ ಕೋರಿದರು. ಅದೇ ರೀತಿ ಕಾಂಗ್ರೆಸ್ ಮುಖಂಡರು ಆದ ಲೋಕೇಶ್ ಕುಮಾರ್ ಮಾದಾಪುರ ಅವರ ಹುಟ್ಟುಹಬ್ಬ ಆಗಿರುವುದರಿಂದ ಅವರಿಗೂ ಕೂಡ ಶುಭ ಹಾರೈಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರು ಆಗಿರುವ ಕೆ ಎಸ್ ಶಿವರಾಮ್ ರವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಹುಟ್ಟುಹಬ್ಬವನ್ನು ಯಾವುದೇ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳದೆ ವಿಶೇಷ ಚೇತನ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದೇನೆ ಇದು ನನಗೆ ಜೀವನದಲ್ಲಿ ಸಾಕಷ್ಟು ನೆಮ್ಮದಿಯನ್ನು ನೀಡುತ್ತದೆ, ಹುಟ್ಟು ಹಬ್ಬದ ನೆಪದಲ್ಲಿ ಅನಗತ್ಯವಾಗಿ ಖರ್ಚು ಮಾಡುವ ಬದಲಾಗಿ ಈ ರೀತಿ ವಿಶೇಷ ಚೇತನ ಹಾಗೂ ಕಿವುಡು ಮೂಗ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದ್ದು, ಪ್ರತಿಯೊಬ್ಬರೂ ಕೂಡ ಈ ರೀತಿ ವಿಶೇಷ ಚೇತನ ಹಾಗೂ ಬಡ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಂಡು ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿ ಎಂದು ಮನವಿ ಮಾಡಿದರು.. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ ಸಾಮಾಜಿಕ ಹೋರಾಟ, ಶೋಷಿತರ ಪರವಾಗಿ ದಲಿತರ ದಮನಿತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿಯೂ ಕೂಡ ಈ ಹೋರಾಟ ಮುಂದುವರಿಯುತ್ತದೆ ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್ ಕುಮಾರ್ ಮಾದಾಪುರ, ಹರೀಶ್ ಮೊಗಣ್ಣ, ಯೋಗೇಶ್ ಉಪ್ಪಾರ್, ಎಚ್ ಎಸ್ ಪ್ರಕಾಶ್ , ಪರಿಸರ ಕೃಷ್ಣಪ್ಪ (ಗಂಟಯ್ಯ) ರವಿನಂದನ್, ಮಹೇಂದ್ರ ಕಾಗಿನೆಲೆ, ಜಯಲಕ್ಷ್ಮಿ, ರಾಜಶೇಖರ್ , ಎನ್ ಆರ್ ಮೊಹಲ್ಲಾ ಸಿದ್ದು, ಶಿಂಷಾ ದಿನೇಶ್, ಪ್ರಕಾಶ್, ಗೋವಿಂದ್ ಉಪ್ಪಾರ್, ಅರುಣ್ ಕುಮಾರ್ ಹಾಜರಿದ್ದರು.