ಮೈಸೂರು: ನಗರದ ಕೆ ಜಿ ಕೊಪ್ಪಲ್ ನಲ್ಲಿರುವ ಆದಿಶಕ್ತಿ ಚಾಮುಂಡೇಶ್ವರಿ ದೇವಿಯಲ್ಲಿ ಶ್ರೀ ದುರ್ಗಾಪೌಂಡೇಶನ್ ವತಿಯಿಂದ ಆರ್ ಸಿ ಬಿ ತಂಡದ ಹೆಸರಿನಲ್ಲಿ ಉಪವಾಸದಲ್ಲಿ ಕುಂಕುಮ ಅಭಿಷೇಕ ಮಾಡಿ ಆರ್ಸಿಬಿ ತಂಡ ಜಯಗಳಿಸಲಿ ಎಂದು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ವಕೀಲರಾದ ಜಯಶ್ರೀ ಶಿವರಾಮ್, ಸುಶೀಲ, ರೂಪ, ಹೇಮಾ, ವಿಜಯ, ಸುವರ್ಣ, ಹಾಗೂ ಇನ್ನಿತರರು ಪೂಜೆಯಲ್ಲಿ ಭಾಗಿಯಾಗಿದ್ದರು.