Saturday, April 19, 2025
Google search engine

Homeರಾಜ್ಯಕೋರಂ ಅಭಾವ: ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದೂಡಿಕೆ

ಕೋರಂ ಅಭಾವ: ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದೂಡಿಕೆ

ಹೊಸೂರು: ಕೋರಂ ಅಭಾವದಿಂದ  ಸಾಲಿಗ್ರಾಮ ತಾಲೂಕಿನ‌ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದೂಡಲಾಯಿತು.

ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಮಲಮ್ಮ ಮತ್ತು ವಿವೇಕ ನಂದ ಸ್ಪರ್ಧಿಸಿದ್ದರೇ ಉಪಾಧ್ಯಕ್ಷ ಸ್ಥಾನಕ್ಕೆ ಪಾರ್ಥಯ್ಯ ಮತ್ತು ಎಚ್.ಬಿ.ನವೀನ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯ ಸಭೆಯನ್ನು 12ರಿಂದ 1 ಗಂಟೆಯ ವರಗೆ ನಿಗದಿಪಡಿಸಲಾಗುತ್ತು ಅದರೆ  ಸಭೆಗೆ ಸಂಘ 12 ಮಂದಿ  ನಿರ್ದೇಶಕರು  ಗೈರು ಹಾಜರಾದರು.

ಈ  ಹಿನ್ನೆಲೆಯಲ್ಲಿ ಚುನಾವಣೆಯನ್ನು ಚುನಾವಣಾಧಿಕಾರಿ ಕೆ.ಆರ್.ನಗರ ಸಹಕಾರ ಇಲಾಖೆಯ ಸಿಡಿಓ ಎಸ್.ಎಸ್. ರವಿಕುಮಾರ್ ಮುಂದೂಡಿ ಮುಂದಿನ ಚುನಾವಣೆಯನ್ನು  ಸೆ.11 ಸೋಮವಾರಕ್ಕೆ  ನಿಗದಿ ಪಡಿಸಿದರು.

RELATED ARTICLES
- Advertisment -
Google search engine

Most Popular