Sunday, June 8, 2025
Google search engine

Homeರಾಜ್ಯನಮಗೆ ರೈತರ ಪರ ಕೆಲಸ ಮಾಡಲು ಬಿಡಿ: ಎನ್ ಚೆಲುವರಾಯಸ್ವಾಮಿ

ನಮಗೆ ರೈತರ ಪರ ಕೆಲಸ ಮಾಡಲು ಬಿಡಿ: ಎನ್ ಚೆಲುವರಾಯಸ್ವಾಮಿ


ಮಂಡ್ಯ: ನಮಗೆ ರೈತರ ಪರ ಕೆಲಸ ಮಾಡಲು ಬಿಡಿ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಕೈ ಮುಗಿದು ಬೇಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ನೀರು ಹೋಗುತ್ತಿದೆ. ಅದು ಕೂಡ ಲೆಕ್ಕಕ್ಕೆ ಬರುತ್ತದೆ
ನಾವು ರೈತಪರ ಇದ್ದೇವೆ ಎಂದು ತಿಳಿಸಿದರು.
ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಿನ್ನೆಲೆ ಇಂದು ಸಿಎಂ ಅವರನ್ನು ಭೇಟಿ ಮಾಡುತ್ತಿದ್ದೇವೆ. ಸಂಜೆ ಸಿಎಂ, ಡಿಸಿಎಂ, ನಾವು ದೆಹಲಿಗೆ ಹೋಗುತ್ತಿದ್ದೇವೆ. ಪ್ರಧಾನಿಯವರನ್ನ, ಸಚಿವರನ್ನ ಭೇಟಿ ಮಾಡುತ್ತೇವೆ. ನಾಳೆ ದೆಹಲಿಯಲ್ಲಿ ಸಂಸದರ ಜೊತೆ ಸಭೆ ಮಾಡುತ್ತೇವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಫೈಲ್ ಮಾಡುತ್ತೇವೆ. ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಂಸದರನ್ನ ಕರೆದು ಸಭೆ ಮಾಡುತ್ತೇವೆ ಎಂದು ತಿಳಿಸಿದರು.


ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ. ಐದು ಸಾವಿರ ಕ್ಯೂಸೆಕ್ ಕೇಳಿದ್ದಾರೆ ಸಿಪೇಜ್ ವಾಟರ್ ಹೋಗುತ್ತಿದೆ. ಸುಪ್ರೀಂ ಮುಂದೆ ಗಂಭೀರವಾಗಿ ವಾದ ಮಂಡನೆ ಮಾಡುತ್ತೇವೆ ಎಂದು ಹೇಳಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಒಂದು ವರ್ಷದಿಂದ ಪ್ರಭಾವ ಬೀರಿದೆ.ಚುನಾವಣೆ ಇರುವಾಗ ಹಿನ್ನೆಲೆ ಇದೀಗ ಬಿಸಿ ಮುಟ್ಟಿದೆ. ಮೊನ್ನೆ ಸಭೆ ಸಕ್ಸಸ್ ಪುಲ್ ಆಗಿದೆ
ದೇಶದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಮಿಮ್ಸ್ ಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ:
ಸಚಿವ ಎನ್.ಚಲುವರಾಯಸ್ವಾಮಿ ಮಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊದಲು ಹೆರಿಗೆ ವಾರ್ಡ್ ಗೆ ಭೇಟಿ ನೀಡಿ, ಆಸ್ಪತ್ರೆಯ ವಿವಿಧ ವಾರ್ಡ್ ಗಳನ್ನು ಪರಿಶೀಲನೆ ನಡೆಸಿದರು.
ಮಿಮ್ಸ್ ಆಸ್ಪತ್ರೆಯ ಕುಂದುಕೊರತೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದರು.
ಈ ವೇಳೆ ಸಚಿವ ಚಲುವರಾಯಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸೇರಿ ಅಧಿಕಾರಿಗಳ ವರ್ಗ ಸಾಥ್‌ ನೀಡಿದರು.

RELATED ARTICLES
- Advertisment -
Google search engine

Most Popular