Friday, April 11, 2025
Google search engine

Homeರಾಜಕೀಯಲೋಕಾಯುಕ್ತ ತನಿಖೆ ಮ್ಯಾಚ್ ಫಿಕ್ಸಿಂಗ್: ಬಿಜೆಪಿ ಕೇಳಿ ಸಿಎಂ ವಿಚಾರಣೆ ಮಾಡಬೇಕಾ.? : ಡಾ.ಜಿ.ಪರಮೇಶ್ವರ್

ಲೋಕಾಯುಕ್ತ ತನಿಖೆ ಮ್ಯಾಚ್ ಫಿಕ್ಸಿಂಗ್: ಬಿಜೆಪಿ ಕೇಳಿ ಸಿಎಂ ವಿಚಾರಣೆ ಮಾಡಬೇಕಾ.? : ಡಾ.ಜಿ.ಪರಮೇಶ್ವರ್

ಬೆಂಗಳೂರು: ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯ ವಿಚಾರಣೆ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದ ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಎರಡು ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ. ಬಿಜೆಪಿ ಕೇಳಿ ಸಿಎಂ ವಿಚಾರಣೆ ಮಾಡಬೇಕಾ..? ಎಂದು ಕುಟುಕಿದರು.

ಜೆಪಿಸಿ ವಕ್ಫ್ ಭೂಮಿ ಪರಾಮರ್ಶೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅವರು ಸಮಿತಿ ಆಗಿ ಬಂದ ಹಾಗೆ ಕಾಣುತ್ತಿಲ್ಲ. ಯಾಕಂದ್ರೆ ಸಮಿತಿ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಯಮ ಗಾಳಿಗೆ ತೂರಿ ಒಬ್ಬರೇ ಹೋಗಿದ್ದಾರೆ ಎಂದು ಟೀಕಿಸಿದರು.

RELATED ARTICLES
- Advertisment -
Google search engine

Most Popular