Saturday, April 19, 2025
Google search engine

Homeರಾಜ್ಯಬೆಣ್ಣೆಯಂತೆ ಮೃದುತ್ವದಿಂದ ಸಮಾಜಕ್ಕೆ ಅರ್ಪಿಸಿಕೊಳ್ಳಲು ಶ್ರೀ ಕೃಷ್ಣನ ಅನುಗ್ರಹವಾಗಲಿ: ಸುರೇಶ್ ಎನ್ ಋಗ್ವೇದಿ

ಬೆಣ್ಣೆಯಂತೆ ಮೃದುತ್ವದಿಂದ ಸಮಾಜಕ್ಕೆ ಅರ್ಪಿಸಿಕೊಳ್ಳಲು ಶ್ರೀ ಕೃಷ್ಣನ ಅನುಗ್ರಹವಾಗಲಿ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ:  ಬೆಣ್ಣೆಯಂತೆ ಮೃದುತ್ವದಿಂದ ಸಮಾಜಕ್ಕೆ ಅರ್ಪಿಸಿಕೊಳ್ಳಲು ಶ್ರೀ ಕೃಷ್ಣನ ಅನುಗ್ರಹವಾಗಲಿ. ಮಕ್ಕಳಲ್ಲಿರುವ ಪವಿತ್ರ ಶ್ರೀ ಕೃಷ್ಣ ಭಾವನೆ, ನಗು, ಆನಂದ, ಪ್ರೀತಿ, ಧರ್ಮ ಸಂರಕ್ಷಣೆಯನ್ನು ನಾವು ರೂಡಿಸಿಕೊಳ್ಳೋಣ. ಶ್ರೀ ಕೃಷ್ಣ  ನಾಮ ಮಂತ್ರ  ಜಪದ ಮೂಲಕ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಭಗವಂತನ ಕಾರ್ಯವನ್ನು ಶ್ರದ್ಧೆ, ಭಕ್ತಿಯಿಂದ ಮಾಡಬೇಕು ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಹರದನಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಭಕ್ತ ಮಂಡಳಿಯ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವರ  ಸೇವೆಯನ್ನು ನಿರಂತರವಾಗಿ ಮಾಡೋಣ. ಅನೇಕ ಕಷ್ಟ ಸಂಕಷ್ಟಗಳ ನಿವಾರಣೆ  ಆಗುತ್ತದೆ. ಸರ್ವರಿಗೂ ಒಳ್ಳೆಯ ಭಾವನೆ, ಶಾಂತಿ ಮೂಡಲಿ. ಶ್ರೀ ಕೃಷ್ಣನ ಸ್ಮರಣೆಯೇ ನಮಗೆ ದಿವ್ಯ ಶಕ್ತಿ ನೀಡುತ್ತದೆ. ಶ್ರೀ  ರಾಧಾಕೃಷ್ಣ ವೇಷಧಾರಿಗಳು ಭಗವಂತನ ಸ್ವರೂಪ. ಮಕ್ಕಳ ಶುದ್ಧ ಮನಸ್ಸು ನಮ್ಮದಾಗಲಿ. ಬೆಣ್ಣೆ ಯಂತೆ ನಮ್ಮ  ಶುದ್ಧತೆ, ಪರಿಪೂರ್ಣತೆ,  ಮೃದುತ್ವ  ಜೀವನ ನಮ್ಮ ದಾಗಲಿ.  ಅಹಂಕಾರ ಬಿಡೋಣ, ಪ್ರೀತಿಯ ಸಮಾಜ ಕಟ್ಟೋಣ. ಸದಾ ಪುಣ್ಯಕಾರ್ಯದಲ್ಲಿ ಪಾಲ್ಗೊಂಡು  ಸಂಸ್ಕೃತಿ, ಪರಂಪರೆಯನ್ನು ರಕ್ಷಿಸೋಣ. ವಿನಾಯಕನ ಭಕ್ತ ಮಂಡಳಿ ಸ್ಥಾಪಿಸಿ ಉತ್ತಮ ಕಾರ್ಯ ಮಾಡಿ ಗ್ರಾಮದ ಏಳಿಗೆಯನ್ನು ನಿರ್ವಹಿಸುತ್ತಿರುವ ಯುವಕರು ಮಾದರಿ ಎಂದು ತಿಳಿಸಿದರು.

ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜ ಯೋಗಿನಿ ಬಿಕೆ ದಾನೇಶ್ವರಿ ರವರು ಮಾತನಾಡಿ ಶ್ರೀ ಕೃಷ್ಣನ ಜನನ ಭಾರತದಲ್ಲಿ ಆಗಿ ದುಷ್ಟ ಶಕ್ತಿಗಳ ನಿರ್ಮೂಲನೆ ಮಾಡಿ ಧರ್ಮ ಸ್ಥಾಪನೆ ಮಾಡಿದ ಶ್ರೀ ಕೃಷ್ಣನ ಸಂದೇಶಗಳು ಪ್ರತಿಯೊಬ್ಬ ಜಗತ್ತಿನ ಮಾನವನಿಗೆ ಅಮೂಲ್ಯವಾದದ್ದು. ಮನುಷ್ಯ ಜನ್ಮವನ್ನು ಸಾರ್ಥಕ ಗೊಳಿಸಲು ಶ್ರೀ ಕೃಷ್ಣನ ವಾಣಿಯಂತೆ ನಾವು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

 ಶ್ರೀ ಕೃಷ್ಣನ ಜನ್ಮ ವಾದಾಗ ಬಂಧನದಲ್ಲಿದ್ದ ಶ್ರೀ ಕೃಷ್ಣ ಪರಮಾತ್ಮನನ್ನು ಬಂಧಿಸಿದ್ದ ಎಂಟು ಬೀಗಗಳು ಕಳಚಿ ಹೋದವು. ಶ್ರೀ ಕೃಷ್ಣನ ಜನ್ಮವು ಆಲದ ಎಲೆಯ ಮೇಲೆ ಆಗಿ, ಭಾರತದ ರೂಪವೂ ಆಲದ ಎಲೆಯಂತೆ ಮೂಡಿ ಇಡೀ ಜಗತ್ತಿಗೆ ಸಂಸ್ಕೃತಿ ,ಪರಂಪರೆ, ಶಾಂತಿ, ಧರ್ಮ,  ನಾಗರಿಕತೆಯನ್ನು ನೀಡಿದ ದೇಶ ಭಾರತವಾಗಿದೆ. ದೇಹ ಅಭಿಮಾನವನ್ನು ಒಡೆಯುವ ಸಂಕೇತವೇ ಮೊಸರು ಮಡಿಕೆ ಹೊಡೆಯುವ ಉತ್ಸವ .  ಅಹಂಕಾರವನ್ನು ಬಿಡೋಣ, ಜ್ಞಾನ ಸಂಪಾದನೆಯಿಂದ ಸ್ವ ಪರಿವರ್ತನೆಯ ಮೂಲಕ ವಿಶ್ವ ಪರಿವರ್ತನೆಯನ್ನು ಮಾಡೋಣ. ಹಳ್ಳಿಗಳು ಪ್ರೀತಿಯ ಸಾಗರವಾಗಬೇಕು .ಆದರೆ ಇಂದು ಹಳ್ಳಿಗಳು ಸಂಕುಚಿತ ಭಾವನೆಯಿಂದ ನರಳುತ್ತಿದೆ. ಹಳ್ಳಿಗಳು ಪವಿತ್ರತೆಯ ಸಂಕೇತ ಹಳ್ಳಿಗಳಲ್ಲಿ ಯುವಶಕ್ತಿಯನ್ನು ಬೆಳೆಸೋಣ. ನಾನತ್ವದ ಅಹಂಕಾರವನ್ನು ತ್ಯಜಿಸಿ, ನಮ್ಮ ಹೃದಯವನ್ನು ಶ್ರೀಮಂತ ಗೊಳಿಸಿಕೊಳ್ಳಲು ಶ್ರೀ ಕೃಷ್ಣನ ಸಂದೇಶಗಳು ನಮಗೆ ಮಾರ್ಗದರ್ಶವಾಗಲಿ. ಯುವಶಕ್ತಿ ಶ್ರದ್ಧೆಯಿಂದ ಭಕ್ತಿಯಿಂದ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಿರುವುದು ಮೆಚ್ಚುವ ಸಂಗತಿ ಎಂದು ತಿಳಿಸಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ 30ಕ್ಕೂ ಹೆಚ್ಚು ರಾಧಾಕೃಷ್ಣರು ವಿವಿಧ ರಾಧಾ ಕೃಷ್ಣ ವೇಷ ಭೂಷಣಗಳೊಂದಿಗೆ ಮೊಸರು ಮಡಿಕೆ ಒಡೆದು ಬೆಣ್ಣೆ ತೆಗೆದು ಆನಂದದಲ್ಲಿ  ಮುಳುಗಿದರು. ಶ್ರೀ ವಿನಾಯಕ ಭಕ್ತ ಮಂಡಳಿಯ  ಸದಸ್ಯರು, ಗ್ರಾಮದ ಭಕ್ತರು, ಮಹಿಳೆಯರು ಇದ್ದರು.

RELATED ARTICLES
- Advertisment -
Google search engine

Most Popular