ಮಂಡ್ಯ: ಮರಳೇಕಾಯಿ ತಿಂದು 8 ಮಂದಿ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಉಪ್ಪಾರ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಸೃಜನ್ (11), ಜ್ಞಾನವಿ (9) , ಸಿಂಚನ (5), ಆಷಿಕಾ (6), ಭುವನೇಶ್ವರಿ (7), ಚರಣ (9), ಧ್ರುವಚರಣ್ (9) , ಚಂದ್ರ (7) ಅಸ್ವಸ್ಥಗೊಂಡ ಮಕ್ಕಳು.

ನೆನ್ನೆ ಸಂಜೆ 5 ಗಂಟೆ ವೇಳೆಗೆ ಆಟವಾಡುವಾಗ ಮನೆಯೊಂದರ ಹಿಂದೆ ಬೆಳೆದಿದ್ದ ಮರಳೇಕಾಯಿ ಗಿಡಗಳನ್ನು ನೋಡಿ ತಿನ್ನುವ ಹಣ್ಣು ಎಂದು ತಿಳಿದುಕೊಂಡು ಅದೇ ಗಿಡದ ಕಾಯಿ ತಿಂದಿರುವ ಮಕ್ಕಳು ಕೂಡಲೇ ಅಸ್ವಸ್ಥಗೊಂಡಿದ್ದಾರೆ. ಸ್ಥಳದಲ್ಲಿ ಕೆಲ ಮಕ್ಕಳಿಗೆ ವಾಂತಿ ಆಗಿದ್ದು, ಕೂಡಲೇ ಮಕ್ಕಳನ್ನು ಪೋಷಕರು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ .
ಪ್ರಥಮ ಚಿಕಿತ್ಸೆ ನೀಡಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮದ್ದೂರು ವೈದ್ಯರು ರವಾನಿಸಲು ಸೂಚಿಸಿದ್ದಾರೆ . ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ