ಮಂಡ್ಯ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದ ಪ್ರಜ್ವಲ್ ಅಶೋಕ್ (21) ನ ಅಂಗಾಂಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರಿಗೆ ಕಳೆದ ಆರು ದಿನಗಳ ಹಿಂದೆ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಅಪಘಾತವಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಈತನ ಮೆದುಳು ನಿಷ್ಕ್ರಿಯವಾಗಿರುವ ಕುರಿತು ವೈದ್ಯರು ಮಾಹಿತಿ ನೀಡಿದ್ದರು.
ಈ ಕಾರಣದಿಂದಾಗಿ ಪ್ರಜ್ವಲ್ ನ ಪೋಷಕರ ಅಪ್ಪಣೆ ಮೆರೆಗೆ ಆತನ ಅಂಗಾಂಗಗಳನ್ನು ಆಸ್ಪತ್ರೆ ವೈದ್ಯರಿಂದ ಬೇರ್ಪಡಿಸಿ ದಾನ ಮಾಡಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಮೃತನ ಶವ ಟೆಸ್ ಛತ್ರದ ಬಳಿಯ ಇಂಗಲಗುಪ್ಪೆಗ್ರಾಮಕ್ಕೆ ಶನಿವಾರ ಆಗಮಿಸುತ್ತದೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.