Friday, April 18, 2025
Google search engine

Homeರಾಜ್ಯಮಂಡ್ಯ: ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ

ಮಂಡ್ಯ: ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ

ಮಂಡ್ಯ: ವರ ಮಹಾಲಕ್ಷ್ಮಿಹಬ್ಬ ಹಿನ್ನಲೆ ಸಕ್ಕರೆನಾಡು ಮಂಡ್ಯದಲ್ಲಿ ಚಾಮುಂಡೇಶ್ವರಿ ಗೆ ಧನಲಕ್ಷ್ಮಿ ಅಲಂಕಾರ ಮಾಡಿದ್ದು, ಭಕ್ತಾದಿಗಳ ಕಣ್ಮನ ಸೆಳೆದಿದೆ.

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇಗುಲದಲ್ಲಿ 500, 200, 100, 50, 20 ಹಾಗೂ10 ರೂ ನ ಹೊಸ ನೋಟುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.

ಭಕ್ತರಿಂದ ಸಂಗ್ರಹಿಸಿದ 3 ಲಕ್ಷ ರೂ ಮೌಲ್ಯದ ನೋಟುಗಳಿಂದ ದೇವಿಯನ್ನು ಅಲಂಕರಿಸಲಾಗಿದ್ದು, ವಿಶೇಷ ಧನಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡೇಶ್ವರಿ ದೇವಿ ಕಂಗೊಳಿಸುತ್ತಿದ್ದಾಳೆ.

ಗರ್ಭಗುಡಿ ಅರ್ಚಕ ಲಕ್ಷ್ಮೀಶ ಅವರು, ಪ್ರತಿ ವರ್ಷ ದೇವಿಗೆ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡುತ್ತಿದ್ದಾರೆ.

ಧನಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular