Saturday, April 19, 2025
Google search engine

Homeಅಪರಾಧಮಂಡ್ಯ: ಟವೆಲ್ ನಿಂದ ಬಿಗಿದು ವೃದ್ದೆಯ ಕೊಲೆ

ಮಂಡ್ಯ: ಟವೆಲ್ ನಿಂದ ಬಿಗಿದು ವೃದ್ದೆಯ ಕೊಲೆ

ಮಂಡ್ಯ: ಟವಲ್ ನಿಂದ ಬಿಗಿದು ವೃದ್ದೆಯನ್ನು ಕೊಲೆ ಮಾಡಿರುವ ಘಟನೆ ಹೆಬ್ಬಾಳ ಸಮೀಪದ ಕಾರ್ಖಾನೆಯೊಂದರಲ್ಲಿ  ನಡೆದಿದೆ.

ನಳಿನಿ ರಮೇಶ್ (62) ಕೊಲೆಯಾದ ವೃದ್ಧೆ.

ಮೃತರು ಕಾಫಿ ಪುಡಿ ಅಂಗಡಿ-ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಪತ್ನಿಯಾಗಿದ್ದಾರೆ.

ಮಂಡ್ಯದ ವಿದ್ಯಾನಗರದ ನಿವಾಸಿಗಳಾದ ಇವರು, ಬ್ಯಾಂಕ್ ನಲ್ಲಿ ಸಾಲ ಪಡೆದು ದಂಪತಿಗಳು ಕಾಫೀ ಪುಡಿ ಅಂಗಡಿ ಹಾಗೂ ಚಿಕೋರಿ ಕಾರ್ಖಾನೆ ನಡೆಸುತ್ತಿದ್ದರು. ಬ್ಯಾಂಕ್ ನಲ್ಲಿ  ಪಡೆದ ಸಾಲ ತೀರಿಸಲಾಗದ ಕಾರಣ ಬ್ಯಾಂಕ್ ಸಿಬ್ಬಂದಿ ಕಾರ್ಖಾನೆಯನ್ನು ವಶಕ್ಕೆ ಪಡೆದಿದ್ದರು.

ಈ ಹಿನ್ನಲೆ ಮಂಡ್ಯ ಬಿಟ್ಟು ಮೈಸೂರಿನ ವೃದ್ದಾಶ್ರಮದಲ್ಲಿ ದಂಪತಿಗಳು ವಾಸಿಸುತ್ತಿದ್ದರು. ಇತ್ತೀಚಿಗೆ ಮಂಡ್ಯದ ಚಿಕೋರಿ ಕಾರ್ಖಾನೆಯ ಮನೆಯಲ್ಲಿ ಮೃತ ವೃದ್ಧೆ ವಾಸವಿದ್ದರು.

ಯಾರೋ ದುಷ್ಕರ್ಮಿಗಳು ಟವೆಲ್ ನಿಂದ ಬಿಗಿದು ವೃದ್ದೆಯ ಕೊಲೆ ಮಾಡಿದ್ದು, ಆಸ್ತಿಗಾಗಿ ಕೊಲೆಯಾಗಿರುವ ಶಂಕೆ ವ್ಯಕ್ತ ವ್ಯಕ್ತವಾಗಿದೆ.

ಸ್ಥಳಕ್ಕೆ ಮಂಡ್ಯ ಎಸ್ ಪಿ ಎನ್.ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವೃದ್ದೆಯ ಶವವನ್ನು ಮಂಡ್ಯ ಮಿಮ್ಸ್ ಶವಗಾರಕ್ಕೆ ರವಾನಿಸಲಾಗಿದೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular