ಮಂಡ್ಯ: ಮಂಡ್ಯ ನಗರದ ಹೃದಯ ಭಾಗಕ್ಕೆ ಮೈತ್ರಿ ಪಕ್ಷದ ಪಾದಯಾತ್ರೆ ಆಗಮಿಸಿದ್ದು, ಮಂಡ್ಯದ ಮಹಾವೀರ್ ವೃತ್ತದ ಬಳಿ ಎಚ್ಡಿಕೆ ಸೇರಿ ಬಿಜೆಪಿ ನಾಯಕರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಕ್ರೇನ್ ಮೂಲಕ ಬೃಹತ್ ಹಾಕಿ , ಜೈಕಾರ ಕೂಗಿ ಅದ್ದೂರಿ ಸ್ವಾಗತ ಕೋರಿದರು.
ಮಂಡ್ಯದ ಸಂಜಯ್ ವೃತ್ತದ ಬಳಿ ಮೈತ್ರಿ ನಾಯಕರಿಂದ ಭಾರೀ ಬಹಿರಂಗ ಸಭೆ ನಡೆಯಿತು. ಹೆದ್ದಾರಿ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ವೇದಿಕೆ ಮಾಡಿ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಯಿತು.