Saturday, April 19, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಫೆ.2ರಂದು 'ಟೀನ್‌ಸ್ಪೇಸ್' ವಿದ್ಯಾರ್ಥಿ ವಿಚಾರಗೋಷ್ಠಿ

ಮಂಗಳೂರು: ಫೆ.2ರಂದು ‘ಟೀನ್‌ಸ್ಪೇಸ್’ ವಿದ್ಯಾರ್ಥಿ ವಿಚಾರಗೋಷ್ಠಿ

ಮಂಗಳೂರು (ದಕ್ಷಿಣ ಕನ್ನಡ): ಕರ್ನಾಟಕ ಸಲಫಿ ಅಸೋಸಿಯೇಷನ್‌ನ ವಿದ್ಯಾರ್ಥಿ ಘಟಕ ಮತ್ತು ವಿಸ್ಟಮ್ ಸ್ಟಡೆಂಟ್ ಜಂಟಿಯಾಗಿ ಫೆ.2ರಂದು ಬೆಳಗ್ಗೆ 8.30ಕ್ಕೆ ಮಂಗಳೂರು ನಗರದ ಪುರಭವನದಲ್ಲಿ ‘ಟೀನ್‌ಸ್ಪೇಸ್’ ಎಂಬ ವಿದ್ಯಾರ್ಥಿ ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಖಲೀಲ್ ತಲಪಾಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ವಿಚಾರಗೋಷ್ಠಿಯಲ್ಲಿ ಹತ್ತನೇ ತರಗತಿ, ಪದವಿ ಪೂರ್ವ ಹಾಗೂ ಪದವಿಯ ವಿದ್ಯಾರ್ಥಿಗಳು ನೋಂದಣಿ ಮಾಡಬಹುದು. ಪ್ರವೇಶ ಉಚಿತವಾಗಿರುತ್ತದೆ. ಸಂಜೆ 5:30ರವರೆಗೆ ಕಾರ್ಯಕ್ರಮ ನಡೆಯಲಿದೆ. ಡ್ರಗ್ಸ್, ಮಾನಸಿಕ ಖಿನ್ನತೆ, ದ್ವೇಷ, ಅಪರಾಧ ಚಟುವಟಿಕೆ ಇತ್ಯಾದಿಗಳಲ್ಲಿ ಬಲಿಯಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ಈ ವಿಚಾರಗೋಷ್ಠಿಯಲ್ಲಿ ವಿವಿಧ ವಿಷಯಗಳಲ್ಲಿ ಚರ್ಚೆ, ವಿಷಯ ಮಂಡಿಸಲು ಅನುಭವಿ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಹಾಫಿಝ್ ರಾಝಿಕ್ ಸೌದಾಗರ್ ಮುಂತಾದವರು ಭಾಗವಹಿಸಲಿದ್ದಾರೆ. ಡಾ.ಹಫೀಝ್ ಸ್ವಲಾಹಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular