ಮೈಸೂರು: ಮೈಸೂರು ರಾಜ್ಯಕ್ಕೆ ಪ್ರಜಾಪ್ರಭುತ್ವದ ಸ್ವಾತಂತ್ರ್ಯಕ್ಕಾಗಿ ನಡೆದ ವಿದ್ಯಾರ್ಥಿ ಸಂಘಟನೆಯ ಹೋರಾಟದಲ್ಲಿ ಹುತಾತ್ಮನಾದ ರಾಮಸ್ವಾಮಿ ರವರಿಗೆ ಯುವಭಾರತ್ ಸಂಘಟನೆಯ ವತಿಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಹುತಾತ್ಮ ರಾಮಸ್ವಾಮಿ ದಿವಸ್ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಾಮಸ್ವಾಮಿ ಸ್ಮಾರಕಕ್ಕೆ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ರವರು ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.
ಇದೇ ಸಂಧರ್ಭದಲ್ಲಿ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ರವರು ಮಾತನಾಡಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಮೈಸೂರು ರಾಜ್ಯಕ್ಕೆ ಪ್ರಜಾಪ್ರಭುತ್ವ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿ ನಡೆದ ವಿದ್ಯಾರ್ಥಿ ಚಳವಳಿಗಳಲ್ಲಿ 1947ರ ಸೆಪ್ಟಂಬರ್ 13ರಂದು ಭಾರತ ತ್ರಿವರ್ಣ ಧ್ವಜ ಹಾರಿಸಿ ಮೈಸೂರು ರಾಜ್ಯದ ಕಮೀಷನರ್ ನಾಗರಾಜರಾಯರ ಗುಂಡೇಟಿಗೆ ರಾಮಸ್ವಾಮಿ ಬಲಿಯಾದರು ಎಂದು ಸ್ಮರಿಸಿದರು.
ನಂತರ ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ರವರು ಮಾತನಾಡಿ, ಹಾರ್ಡ್ವೀಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ರಾಮಸ್ವಾಮಿ ತನ್ನ ಜನ್ಮದಿನದ ಆಚರಣೆ ಪ್ರಯುಕ್ತ ಬಲ್ಲಾಳ್ ಕಾಂಪ್ಲೆಕ್ಸ್ ನಲ್ಲಿ ಸಿಹಿ ಪೊಟ್ಟಣ್ಣ ಕಟ್ಟಿಸಿಕೊಂಡು ತನ್ನ ಸಹಪಾಠಿಗಳಿಗೆ ನೀಡಲು ತರಗತಿಗೆ ಬಂದಾಗ ಸ್ನೇಹಿತರೆಲ್ಲರೂ ಚಳವಳಿಯಲ್ಲಿ ಭಾಗವಹಿಸಿರುವ ವಿಷಯ ತಿಳಿದು ಅಂದಿನ ಫೈವ್ ಲೈಟ್ ವೃತ್ತ (ರಾಮಸ್ವಮಿ ಸರ್ಕಲ್) ಬಂದು ಸಿಹಿ ಕೊಟ್ಟು ಭಾರತಧ್ವಜವನ್ನ ಧೈರ್ಯವಾಗಿ ಹಿಡಿದು ಕಂಬವನ್ನೇರಿ ಹಾರಿಸಿ ಪ್ರಾಣಬಿಡುತ್ತಾನೆ, ರಾಮಸ್ವಾಮಿ ರವರ ಹೋರಾಟ ಪ್ರಾಣತ್ಯಾಗ ದೇಶಪ್ರೇಮವನ್ನ ಸ್ಮರಿಸಿ ಪ್ರತಿವರ್ಷದಂತೆ ರಾಮಸ್ವಾಮಿ ರವರ ಹುತಾತ್ಮ ದಿವಸ್ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ನಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್ ರವರು ಮಾತನಾಡಿ ರಾಮಸ್ವಾಮಿ ವೃತ್ತವನ್ನ ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿ ರಾಮಸ್ವಾಮಿ ರವರ ಜೀವನಚರಿತ್ರೆ ಮಾಹಿತಿಯ ನಮಫಲಕ ಅಳವಡಿಸಲು ದಸರಾ ಸಂಧರ್ಭದಲ್ಲಿ ಜಿಲ್ಲಾಡಳಿತ ಮುಂದಾಗಬೇಕು ಮತ್ತು ಹಳೇ ಮೈಸೂರಿನ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸಾಹಿತಿಗಳು ಕವಿಗಳು ಕಲಾವಿದರು ಸಹಕಾರಿಗಳು ಶಿಕ್ಷಣ ವಿದ್ವಾಂಸರು ಉದ್ಯಮಿಗಳು ಮೈಸೂರಿನ ಅಸ್ಮಿತೆ ಕೀರ್ತಿಯನ್ನ ಶತಮಾನದ ಹಿಂದೆಯೇ ಹೆಚ್ಚಿಸಿದ್ದಾರೆ ಅವರ ಇತಿಹಾಸ ಕೊಡುಗೆಯನ್ನ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಜಿಲ್ಲಾಡಳಿತ ನಗರಪಾಲಿಕೆ ಕನ್ನಡ ಸಂಸ್ಕೃತಿ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನ ಮೂಲಕ ಯೋಜನೆ ರೂಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮೇಲುಕೋಟೆಯ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್, ಮಾಜಿನಗರಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್, ಮಾ ವಿ ರಾಮಪ್ರಸಾದ್, ಯುವ ಭಾರತ್ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್, ಮಾಧ್ಯಮ ಸಂಚಾಲಕರಾದ ಮಹೇಶ್ ರಾಜೇ ಅರಸ್, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಮಾರ್ಟ್ ಮಂಜು, ಸುದರ್ಶನ್, ಶ್ರೀನಿವಾಸ್, ಚರಣ್, ಚಕ್ರಪಾಣಿ, ಮಿರ್ಲೆ ಪಣೀಷ್, ಸುಚಿಂದ್ರ, ಎಸ್ ಎನ್ ರಾಜೇಶ್, ಹಾಗೂ ಇನ್ನಿತರರು ಹಾಜರಿದ್ದರು.