Thursday, May 15, 2025
Google search engine

Homeಅಪರಾಧಕಾನೂನುಕರ್ನಲ್ ಸೋಫಿಯಾ ವಿರುದ್ಧ ಅವಹೇಳನ: ಸಚಿವ ವಿಜಯ್ ಶಾ ರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು...

ಕರ್ನಲ್ ಸೋಫಿಯಾ ವಿರುದ್ಧ ಅವಹೇಳನ: ಸಚಿವ ವಿಜಯ್ ಶಾ ರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ

ನವದೆಹಲಿ: ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಲ್ಲೇಖಿಸಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಬ್ಬಲ್ಪುರ ಹೈಕೋರ್ಟ್ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಶಾ ಸುಪ್ರೀಂ ಕೋರ್ಟ್ ಮೊರೆಹೋದರು. ವಿಚಾರಣೆ ವೇಳೆ ಕೋರ್ಟ್, “ಇಂತಹ ಸಮಯದಲ್ಲಿ ಇಂಥ ಹೇಳಿಕೆಗಳು ಅಸ್ವೀಕಾರಾರ್ಹ. ನಾಯಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು,” ಎಂದು ತೀವ್ರವಾಗಿ ಎಚ್ಚರಿಸಿದೆ.

ಇಂದೋರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾ, “ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದ್ದರು. ಅವರಿಗೆ ಪಾಠ ಕಲಿಸಲು ನಾವು ಸಹೋದರಿಯನ್ನು ಕಳಿಸಿದ್ದೇವೆ,” ಎಂದು ಹೇಳಿದ್ದರು. ಇದು ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಪ್ರಯುಕ್ತ ನೀಡಿದ ಭಾಷಣವಾಗಿತ್ತು.

ಹಾಗೆಂದರೂ, ಅವರ ಈ ಮಾತುಗಳು ಮುಸ್ಲಿಂ ಸಮುದಾಯದ ಹೆಮ್ಮೆಯ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಲ್ಲೇಖಿಸುತ್ತವೆಂದು ಜನಸಾಮಾನ್ಯರು ಗ್ರಹಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ಎದುರಾಗಿದೆ. ಹೈಕೋರ್ಟ್ ಈ ಹೇಳಿಕೆಯನ್ನು ಅಶ್ಲೀಲ ಎನ್ನುತ್ತಾ ಕ್ರಮಕ್ಕೆ ಸೂಚಿಸಿತ್ತು.

RELATED ARTICLES
- Advertisment -
Google search engine

Most Popular