Saturday, March 14, 2026
Google search engine

Homeರಾಜ್ಯತಪ್ಪು ಮಾಹಿತಿ ಆರೋಪ: ವಿಧಾನಸಭೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸದಸ್ಯರ ಆಕ್ಷೇಪ

ತಪ್ಪು ಮಾಹಿತಿ ಆರೋಪ: ವಿಧಾನಸಭೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸದಸ್ಯರ ಆಕ್ಷೇಪ

ಬೆಂಗಳೂರು : ವಿಧಾನಸಭೆಯಲ್ಲಿ ತಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡದ ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಶಾಸಕರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು. ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯಕ್ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ ಸಚಿವ ಮಲ್ಲಿಕಾರ್ಜುನ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದರು. ಸಚಿವರು ಸದನದ ಕಲಾಪಗಳಿಗೆ ವಿರಳವಾಗಿ ಹಾಜರಾಗುತ್ತಾರೆ ಎಂದು ಹಲವಾರು ಸದಸ್ಯರು ಅಭಿಪ್ರಾಯಪಟ್ಟರು.

ಪ್ರಶ್ನೋತ್ತರ ಅವಧಿಯಲ್ಲಿ, ಶಿರಸಿ ಶಾಸಕ ಭೀಮಣ್ಣ ಟಿ.ನಾಯಕ್ ಅವರು ಅಡಿಕೆ ಬೆಳೆಗಳ ಮೇಲೆ ಪರಿಣಾಮ ಬೀರುವ ಎಲೆ ಚುಕ್ಕೆ ರೋಗದ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಈ ವೇಳೆ ಸಚಿವರ ಉತ್ತರದ ಅಂಕಿ ಅಂಶಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಸುನಿಲ್ ಕುಮಾರ್, ‘ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಬಿಡುಗಡೆಯಾದ ಹಾಗೂ ಬಳಕೆಯಾದ ಹಣದ ಬಗ್ಗೆ ಹೇಳಿದ್ದೀರಿ. 16,866 ಜನರಿಗೆ 5.53 ಕೋಟಿ ಬಿಡುಗಡೆ ಮಾಡಲಾಗಿದೆ ಅಂತಾ ಸಚಿವರು ಒಂದು ಉತ್ತರ ನೀಡಿದ್ದಾರೆ. ಸಚಿವರ ಉತ್ತರದ ಕೊನೆಯಲ್ಲಿ ಮತ್ತೊಂದನ್ನು ಉಲ್ಲೇಖಿಸಿದ್ದಾರೆ’ ಎಂದು ವಿವರಿಸಿದರು.

ಆದರೆ ಸಚಿವರು ತಮ್ಮ ಉತ್ತರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಪ್ರತಿಕ್ರಿಯೆಯಿಂದ ಅತೃಪ್ತರಾದ ಬಿಜೆಪಿ ಸದಸ್ಯರು ಪೂರಕ ಪ್ರಶ್ನೆಗಳನ್ನು ಎತ್ತಿದರು. ಸಚಿವರು ತೃಪ್ತಿದಾಯಕ ಉತ್ತರಗಳನ್ನು ನೀಡಲು ವಿಫಲರಾದರು.

ಕೊನೆಗೆ ಗೊಂದಲಕ್ಕೆ ತೆರೆ ಎಳೆಯಲು ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ಮಾಹಿತಿ ಪಡೆದು ಗೊಂದಲ ಬಗೆಹರಿಸಿ ಎಂದು ಸಚಿವರಿಗೆ ಸಲಹೆ ನೀಡಿದರು. ಅಲ್ಲದೆ, ಇದೇ ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ಕೊಡುವಂತೆ ಸಚಿವರಿಗೆ ತಾಕೀತು ಮಾಡಿದರು. ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಕಲಬುರಗಿಯಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಬಗ್ಗೆ ಸಚಿವರಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದರು. ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ವಿಫಲವಾದ ನಂತರ ಸಚಿವರು ಮತ್ತೆ ಸದಸ್ಯರಿಂದ ಟೀಕೆಗೆ ಒಳಗಾದರು.

ಎಲ್ಲದಕ್ಕೂ ಹೀಗೆ ಮಾಡಬೇಡಿ, ನಾವು ಬಜೆಟ್ ಬುಕ್ ಹಿಡಿದು ಚರ್ಚೆ ಮಾಡ್ತೇವೆ. ನೀವು ಉತ್ತರ ಕೊಡಿಸಬೇಕು, ಸದನಕ್ಕೆ ತಪ್ಪು ಉತ್ತರ ಕೊಟ್ಟರು ಹೇಗೆ ಸುಮ್ಮನಿರೋದು. ಇಲ್ಲ ಉತ್ತರವನ್ನ ವಾಪಸ್ ಪಡೆಯಲಿ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular