ಮಂಡ್ಯ: ಮೇಲುಕೋಟೆ ದೇವಾಲಯದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹರಕೆ ತೀರಿಸಿದ್ದಾರೆ.
ಚುನಾವಣೆ ಗೆಲುವಿಗಾಗಿ ಕ್ಷೇತ್ರದ ರೈತ ಮುಖಂಡರು ಹರಕೆ ಹೊತ್ತಿದ್ದು, ಈ ಹಿನ್ನಲೆ ಇಂದು ಕಡೆಯ ಶ್ರಾವಣ ಮಾಸ ಹಿನ್ನಲೆ ಯೋಗನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಬೆಟ್ಟದ 365 ಮೆಟ್ಟಿಲುಗಳಿಗೆ ಈಡುಗಾಯಿ ಹೊಡೆದು ಹರಕೆ ತೀರಿಸಿದ್ದಾರೆ.
ರೈತ ಮುಖಂಡರ ಜೊತೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಅಭಿನಂದಿಸಿದೆ.
ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜೊತೆ ಜನತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.