Sunday, April 20, 2025
Google search engine

Homeಸ್ಥಳೀಯಸಿಗರೇಟ್ ಬಳಸುತ್ತಿರುವವರು ವಯಸ್ಕರಿಗಿಂತ ಹೆಚ್ಚು ಮಕ್ಕಳು!

ಸಿಗರೇಟ್ ಬಳಸುತ್ತಿರುವವರು ವಯಸ್ಕರಿಗಿಂತ ಹೆಚ್ಚು ಮಕ್ಕಳು!

ಜೂನ್ 29 ರಂದು ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆ ವತಿಯಿಂದ ತಂಬಾಕು ವಿರೋಧಿ ರ‍್ಯಾಲಿ

ಮೈಸೂರು: ಜೂನ್ 29 ರಂದು ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆ ವತಿಯಿಂದ ತಂಬಾಕು ವಿರೋಧಿ ರ‍್ಯಾಲಿ “ಸೈಕ್ಲೋಥಾನ್” ರ‍್ಪಡಿಸಲಾಗಿದೆ. ಅಂದು ಬೆಳಗ್ಗೆ 7 ಗಂಟೆಗೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಮುತ್ತುರಾಜು.ಎಂ ಮತ್ತು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸೈಕ್ಲೊಥಾನ್‌ಗೆ ಚಾಲನೆ ನೀಡಲಿದ್ದಾರೆ..

ಸೆಕ್ಲೋಥಾನ್‌ ಬಗ್ಗೆ ಗುರುವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಸಲಹೆಗಾರ ಹಾಗೂ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಶ್ರೀನಿವಾಸ್ ಕೆ.ಜಿ, “ಸಿಗರೇಟ್ ಸೇವನೆಯಿಂದ ಶೇಕಡಾ 90ರಷ್ಟು ಶ್ವಾಸಕೋಶ ಕ್ಯಾನ್ಸರ್‌ ಬರುವ ಅಪಾಯವಿದೆ.ಬಾಯಿ, ಮೂಗು, ಗಂಟಲು, ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗಳಿಗೂ ಇದು ದಾರಿ ಮಾಡಿಕೊಡಬಹುದು. ಅನ್ನನಾಳ, ಯಕೃತ್ತು, ಮೂತ್ರಕೋಶ, ಮೂತ್ರಪಿಂಡ, ಮೇದೋಜ್ಜೀರಕ ಗ್ರಂಥಿ, ಕೊಲೊನ್, ಗುದನಾಳ, ರ‍್ಭಕಂಠ, ಹೊಟ್ಟೆ, ರಕ್ತ, ಮೂಳೆ ಮಜ್ಜೆ, ಹೀಗೆ ದೇಹದ ಯಾವುದೇ ಭಾಗದ ಕ್ಯಾನ್ಸರ್‌ಗೆ ಇದು ಕಾರಣವಾಗಬಹುದು.

ಸಿಗಾರ್ ಅಥವಾ ಪೈಪ್‌ಗಳಂತಹ ಯಾವುದೇ ರೂಪದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವುದು ಕೂಡಾ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ ಕೆಲವು ಸಿಗರೇಟ್ ಸೇದುವುದು ಅಥವಾ ಕೆಲವೊಮ್ಮೆ ಧೂಮಪಾನ ಮಾಡುವುದು ಕೂಡಾ ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.. ಒಬ್ಬ ವ್ಯಕ್ತಿಯು ಹೆಚ್ಚು ರ‍್ಷಗಳ ಕಾಲ ನಿತ್ಯವೂ ಹೆಚ್ಚಿನ ಸಿಗರೇಟ್‌ಗಳನ್ನು ಸೇದಿದರೆ ಅತಿಹೆಚ್ಚು ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

  BHIO ಪೀಡಿಯಾಟ್ರಿಕ್ ಆಂಕೊಲಾಜಿಸ್ಟ್ DM ಡಾ.ಸೌಮ್ಯ ಜೆ ಮಾತನಾಡಿ, ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲಿ ತಂಬಾಕು ಕೂಡಾ ಒಂದು. ಹೀಗಾಗಿ ಈ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಈ ರ‍್ಷದ ವಿಶ್ವ ತಂಬಾಕು ರಹಿತ ದಿನದ ಥೀಮ್ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು”. ತಂಬಾಕು ಉದ್ಯಮ ಯುವಕರನ್ನು ಟರ‍್ಗೆಟ್‌ ಮಾಡಿಕೊಂಡು ಜೀವಮಾನವಿಡೀ ಲಾಭ ಮಾಡಲು ಪ್ರಯತ್ನಿಸುತ್ತದೆ. ಅದಕ್ಕಾಗಿ ಹೊಸ ರೀತಿಯ ವ್ಯಸನದ ಅಲೆಯನ್ನು ಸೃಷ್ಟಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಇ-ಸಿಗರೇಟ್‌ಗಳನ್ನು ಬಳಸುತ್ತಿದ್ದಾರೆ. ಜಾಗತಿಕವಾಗಿ ಅಂದಾಜು 37 ಮಿಲಿಯನ್ ನಷ್ಟು 13-15 ರ‍್ಷ ವಯಸ್ಸಿನವರು ತಂಬಾಕು ಬಳಸುತ್ತಾರೆ. ಇ-ಸಿಗರೇಟ್‌ಗಳನ್ನು ಬಳಸುವ ಮಕ್ಕಳು ಮತ್ತು ಹದಿಹರೆಯದವರು ನಂತರದಲ್ಲಿ ಸಿಗರೇಟ್‌ ಸೇದುವುದನ್ನು ದ್ವಿಗುಣಗೊಳಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಂಬಾಕನ್ನು ಎರಡು ರೂಪಗಳಲ್ಲಿ ಬಳಸಲಾಗುತ್ತದೆ: ಧೂಮಪಾನ (ಸಿಗರೇಟ್, ಬೀಡಿ), ಹೊಗೆರಹಿತ (ಕೈನಿ, ಗುಟ್ಕಾ, ರ‍್ದಾ ಇತ್ಯಾದಿ) ಹೀಗೆ ಎರಡು ರೂಪದಲ್ಲಿ ಬಳಸಲಾಗುತ್ತದೆ. ಇವೆರಡೂ ಕೂಡಾ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತವೆ. ಪೋಷಕರು ಧೂಮಪಾನ ಮಾಡಿದರೆ, ಪಕ್ಕದಲ್ಲಿರುವ ಮಕ್ಕಳಿಗೂ ಅದರಿಂದ ತೊಂದರೆಯಾಗುತ್ತದೆ. ಮಕ್ಕಳು ಸೆಕೆಂಡ್‌ ಹ್ಯಾಂಡ್‌ ಧೂಮಪಾನಿಗಳಾಗಲಿದ್ದು, ಅದರಿಂದ ಆರೋಗ್ಯ ತೊಂದರೆಗಳಾಗಲಿವೆ. ಹದಿಹರೆಯದ ಮಕ್ಕಳು ಸಾಮಾನ್ಯವಾಗಿ ಗೆಳೆಯರ ಒತ್ತಡ ಅಥವಾ ಕುತೂಹಲದಿಂದ ಧೂಮಪಾನ / ತಂಬಾಕು ಸೇವನೆಯನ್ನು ಪ್ರಾರಂಭಿಸುತ್ತಾರೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ಸೇವನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ಪ್ರತಿಪಾದಿಸುವುದು ಈ ಸಮಯದ ಅಗತ್ಯವಾಗಿದೆ” ಎಂದು ಡಾ.ಸೌಮ್ಯ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ BHIO ನ ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿಸ್ಟ್ ಡಾ.ಅಭಿಲಾಷ್ ಜಿಹೆಚ್, “ಭಾರತ್ ಆಸ್ಪತ್ರೆಯಲ್ಲಿ, ನಾವು ಧೂಮಪಾನ ಮುಕ್ತ ಭವಿಷ್ಯವನ್ನು ರಚಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಹದಿಹರೆಯದವರಲ್ಲಿ ಜಾಗೃತಿ ಕರ‍್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ನಾವು ತಂಬಾಕು ಮುಕ್ತ ಜೀವನದ ಸಾಧ್ಯತೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಯುವ ಮನಸ್ಸುಗಳನ್ನು ಸಬಲಗೊಳಿಸುತ್ತಿದ್ದೇವೆ. ಯುವಕರಿಗೆ ಈ ಬಗ್ಗೆ ಶಿಕ್ಷಣ ಮತ್ತು ಮಾಹಿತಿ ನೀಡುವುದರ ಮೂಲಕ ಭವಿಷ್ಯದ ಪೀಳಿಗೆಯನ್ನು ತಂಬಾಕಿನ ಅಪಾಯಗಳಿಂದ ರಕ್ಷಿಸಬಹುದು ಎಂದು ಹೇಳಿದ್ದಾರೆ.

ಸೈಕಲ್ ರ‍್ಯಾಲಿ: ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಜಯಚಾಮರಾಜೇಂದ್ರ ವೃತ್ತ, ಗನ್‌ಹೌಸ್, ಕರ‍್ಪೊರೇಷನ್ ವೃತ್ತದ ಮೂಲಕ ಸಾಗುವ ಸೈಕಲ್ ರ‍್ಯಾಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಗೆ ಅದೇ ಮರ‍್ಗದಲ್ಲಿ ಹಿಂತಿರುಗಲಿದೆ. ವಿವಿಧ ಕಾಲೇಜುಗಳ ವಿದ್ಯರ‍್ಥಿಗಳು, ಬಿಎಚ್‌ಐಒದ ವೈದ್ಯರು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ.

RELATED ARTICLES
- Advertisment -
Google search engine

Most Popular