Thursday, April 3, 2025
Google search engine

Homeಅಪರಾಧಕಾನೂನುಮುಡಾ ಹಗರಣ : ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಮಾ.25ಕ್ಕೆ

ಮುಡಾ ಹಗರಣ : ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಮಾ.25ಕ್ಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಮುಡಾ ಪ್ರಕರಣದ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಹೊಸ ತಿರುವು ಎನ್ನುವಂತೆ ತನ್ನ ಕೇಸ್ ತಾನೇ ಇಂದು ದೂರುದಾರ ಸ್ನೇಹಮಯಿ ಕೃಷ್ಣ ವಾದಿಸಲಿದ್ದಾರೆ. ಈಗಾಗಲೇ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗಿದೆ.

ಮುಡಾ ಹಗರಣದಲ್ಲಿ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ತಕರಾರು ಅರ್ಜಿ ವಿಚಾರಣೆ ಆರಂಭವಾದಾಗ, ಜಮೀನ ಮಾಲೀಕರು ಯಾರು ಎಂಬುದನ್ನು ತನಿಖೆ ಮಾಡಿಲ್ಲ. ಡಿನೋಟಿಫಿಕೇಶನ್ ಆದ ಮೇಲೆ ಬಡಾವಣೆ ರಚನೆ ಹೇಗೆ ಮಾಡಿದರು? ಡಿ ನೋಟಿಫಿಕೇಶನ್ ಪರಕ್ರಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲ. ಬಡಾವಣೆಯನ್ನು ಕೃಷಿ ಜಮೀನು ಎಂದು ಮಾರಾಟ ಮಾಡಿದ್ದಾರೆ.

2024ರಲ್ಲಿ ದೇವನೂರು ಬಡಾವಣೆಯಲ್ಲಿ 369 ನಿವೇಶನಗಳಿದ್ದವು. ಹೀಗಾಗಿಯೇ ದೇವನೂರು ಬಡಾವಣೆ ಎಂದು ಬರೆದಿದ್ದ ಪತ್ರಕ್ಕೆ ವೈಟ್ನರ್ ಹಾಕಿದ್ದಾರೆ. ದೇವನೂರು ಬಡಾವಣೆಯಲ್ಲಿ ನಿವೇಶನವಿದ್ದರೂ ದುಬಾರಿ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ದೇವನೂರಲ್ಲಿ ನಿವೇಶನವಿದ್ದರೂ ದುಬಾರಿ ಬಡಾವಣೆಯಲ್ಲಿ ಹಂಚಿಕೆ ಎಂದು ವಾದ ಮಂಡಿಸಿದರು. ಈ ವೇಳೆ ವಿಚಾರಣೆಯನ್ನು ಕೋರ್ಟ್ ಮಾರ್ಚ್ 25ಕ್ಕೆ ಮುಂದೂಡಿತು.

RELATED ARTICLES
- Advertisment -
Google search engine

Most Popular