Monday, April 21, 2025
Google search engine

Homeರಾಜ್ಯಸುದ್ದಿಜಾಲಶ್ರೀಮತಿ ಅನಿತಾಕೌಲ್ ಸ್ಮರಣಾರ್ಥ ಪ್ರಶಸ್ತಿಗೆ ಭಾಜನರಾದ ಕೆ.ಆರ್.ನಗರದ ಶಿಕ್ಷಕ ಮುಕುಂದ ಆಯಿರಹಳ್ಳಿ

ಶ್ರೀಮತಿ ಅನಿತಾಕೌಲ್ ಸ್ಮರಣಾರ್ಥ ಪ್ರಶಸ್ತಿಗೆ ಭಾಜನರಾದ ಕೆ.ಆರ್.ನಗರದ ಶಿಕ್ಷಕ ಮುಕುಂದ ಆಯಿರಹಳ್ಳಿ

ಕೆ.ಆರ್.ನಗರ: ಕರ್ನಾಟಕ ರಾಜ್ಯ ಜ್ಞಾನ- ವಿಜ್ಞಾನ ಸಮಿತಿಯು 2023ನೇ ಸಾಲಿಗೆ ಕೊಡಮಾಡುವ ಶ್ರೀಮತಿ ಅನಿತಾಕೌಲ್ ಸ್ಮರಣಾರ್ಥ ಪ್ರಶಸ್ತಿಗೆ ಕೆ.ಆರ್.ನಗರ ತಾಲೂಕಿನ ಶಿಕ್ಷಕ ಮುಕುಂದ ಆಯಿರಹಳ್ಳಿ ಭಾಜನರಾಗಿದ್ದಾರೆ.

ತಾಲೂಕಿನ‌ ಕಾಳೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ  ಶಿಕ್ಷಕರಾಗಿರುವ ಇವರು ಕಳೆದ 25 ವರ್ಷಗಳಿಂದ ವಿಜ್ಞಾನ ಚಳುವಳಿಯ ಮೂಲಕ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವೈಜ್ಞಾನಿಕತೆ ಬೆಳೆಸಲು ಶ್ರಮಿಸುತ್ತಿರುವ ಹಿನ್ನಲೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಮುಂದಿನ ತಿಂಗಳು ಜನವರಿ ತಿಂಗಳ 7 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮುಕಂದ ಆಯಿರಹಳ್ಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡುವರು ಎಂದು ಸಮಿತಿಯ ಅಧ್ಯಕ್ಷ ಡಾ.ಸಿ.ಆರ್.ಚಂದ್ರಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿ ಈ.ಬಸವರಾಜು ತಿಳಿಸಿದ್ದಾರೆ.

ಇವರನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್, ತಾಲೂಕು ಒಕ್ಕಲಿಗ ನೌಕರರ ಬಳಗದ ಅಧ್ಯಕ್ಷ ಶಂಕರೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಈಶ್ವರ್ ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular