ಮೈಸೂರು: ಕಾಳಿದಾಸ ರಸ್ತೆಯಲ್ಲಿರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಕಾಂಗರೂ ಫರ್ಟಿಲಿಟಿ ಸೆಂಟರ್ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ಉಡುಗೊರೆ ಯನ್ನು ನೀಡಿ ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ಕಾಂಗರೂ ಆಸ್ಪತ್ರೆಯ ವೈಧ್ಯಕೀಯ ನಿರ್ದೆಶಕರು ಡಾ. ಮಂಜುನಾಥ್ ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವವಿರಲಿ. ಇತ್ತೀಚೆಗೆ ಹೆಣ್ಣಿನ ಸಂಖ್ಯೆ ಕಡಿಮೆ ಆಗುತ್ತಿದ್ದು, ಇದರಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಹೆಣ್ಣು ಭ್ರೂಣ ಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು. ಅದು ಕಾನೂನು ರೀತ್ಯಾ ಅಪರಾಧವಾಗಿದೆ. ಕಾರಣ ಸ್ತ್ರೀ ಪುರುಷರ ಅನುಪಾತ ಸಮನಾಗಿರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾಂಗರೂ ಆಸ್ಪತ್ರೆಯ ವೈಧ್ಯಕೀಯ ನಿರ್ದೆಶಕರು ಡಾ. ಮಂಜುನಾಥ್, ಮಕ್ಕಳ ತಜ್ಞರು, ಡಾ.ವೀಣಾ ಕೀರ್ತಿ, ಸ್ರೀರೋಗ ತಜ್ಞರು, ಡಾ.ಶೃತಿ ಪುರುಷೋತ್ತಮ ಮಕ್ಕಳ ತಜ್ಞರು ಡಾ.ಲೀಲಾವತಿ ಸ್ರೀರೋಗ ತಜ್ಞರು ಹಾಗೂ ಸಿಬ್ಬಂದಿಗಳಾದ ಡಾ.ಅಥಿತಿ, ಶೋಭರಾಣಿ, ಅಕ್ಷತ, ನಿವೇದಿತಾ, ಫರೀನ್ ಹಾಗೂ ಮಂಜುನಾಥ್ ಮತ್ತಿತ್ತರು ಇದ್ದರು,